ಅಪಘಾತಕ್ಕೆ ಬಲಿಯಾದ ಶಿಕ್ಷಕನ ಬಳಿಯಿದ್ದ ಒಂದೂವರೆ ಲಕ್ಷ ಮರಳಿಸಿದ ಪಿಎಸ್‍ಐ

Public TV
1 Min Read
HVR 1

– ಆಂಜನೇಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ

ಹಾವೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶಿಕ್ಷಕನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಮೊಬೈಲ್ ಫೋನ್ ನ್ನ ಮೃತ ಶಿಕ್ಷಕನ ಪತ್ನಿಗೆ ಮರಳಿಸಿ ಪಿಎಸ್‍ಐ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

money 2

ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಸ್ಸೀಮ ಆಲದಕಟ್ಟಿ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಶಿಕ್ಷಕ 45 ವರ್ಷದ ಪರಶುರಾಮ ಕೋಲೂರ ಮೃತಪಟ್ಟಿದ್ರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಪಿಎಸ್‍ಐ ಆಂಜನೇಯ, ಮೃತನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಒಂದು ಮೊಬೈಲ್ ಫೋನ್ ನ್ನ ಮೃತನ ಪತ್ನಿ ದೀಪಾಳಿಗೆ ಒಪ್ಪಿಸಿದ್ದಾರೆ.

HVR 2

ಹಣ ಮತ್ತು ಮೊಬೈಲ್ ಮರಳಿಸಿ ಮಾನವೀಯತೆ ಮೆರೆದ ಪಿಎಸ್‍ಐ ಆಂಜನೇಯ ಕಾರ್ಯಕ್ಕೆ ಮೃತನ ಪತ್ನಿ ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *