Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ

Bengaluru City

ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ

Public TV
Last updated: June 26, 2020 1:39 pm
Public TV
Share
3 Min Read
Kempegowda
SHARE

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರನ್ನ ವಿಶ್ವಕ್ಕೆ ಪರಿಚಯಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ನಾಡಪ್ರಭುವಿನ ಸಾಧನೆ, ಬೆಂಗಳೂರಿನ ನಿರ್ಮಾಣದ ಇತಿಹಾಸವನ್ನ ಅಮರವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಕೆಂಪೇಗೌಡರ ಪ್ರತಿಮೆ ನಿರ್ಮಾಣದ ನಿರ್ಧಾರ ಕೈಗೊಂಡಿದೆ.

ನಾಡಪ್ರಭು ಕೆಂಪೇಗೌಡರ 551ನೇ ಜಯಂತಿಗೆ ರಾಜ್ಯ ಸರ್ಕಾರ ಐತಿಹಾಸ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿದೆ. ನಾಡಪ್ರಭುವಿನ ಸಾಧನೆಯನ್ನ ವಿಶ್ವಕ್ಕೆ ಪರಿಚಯ ಮಾಡಲು ಐತಿಹಾಸಿಕ ಕೆಲಸಕ್ಕೆ ಕೈ ಹಾಕಿದೆ. ಈ ಐತಿಹಾಸಿಕ ಕೆಲಸಕ್ಕೆ ನಾಳೆಯೆ ಅಡಿಗಲ್ಲು ಹಾಕುತ್ತಿದೆ.

bengaluru airport

ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 23 ಎಕರೆ ಜಾಗದಲ್ಲಿ ಸುಮಾರು 66 ಕೋಟಿ ವೆಚ್ಚದಲ್ಲಿ ಪ್ರತಿಮೆ ಜೊತೆಗೆ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಶನಿವಾರ ಕೆಂಪೇಗೌಡರ 551ನೇ ಜಯಂತಿ ಈ ಹಿನ್ನಲೆಯಲ್ಲಿ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವತ್ಥನಾರಾಯಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ ಅವರು, ಕೆಂಪೇಗೌಡರ ಪ್ರತಿಮೆಯ ಮಾದರಿ ವಿನ್ಯಾಸವನ್ನು ಶನಿವಾರ ಬಿಡುಗಡೆ ಮಾಡಲಾಗುತ್ತದೆ. ಸ್ವಾಮೀಜಿಗಳು, ಗಣ್ಯರು, ಸಚಿವರು, ವಿಪಕ್ಷ ನಾಯಕರು ಸೇರಿ ಒಟ್ಟು 50ಕ್ಕೂ ಕಡಿಮೆ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಳಿದವರು ಆನ್‍ಲೈನ್ ವ್ಯವಸ್ಥೆ ಮೂಲಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಿದ್ದಾರೆ. ಮುಂದಿನ ವರ್ಷ ಕೆಂಪೇಗೌಡರ ಜಯಂತಿಗೆ ಪ್ರತಿಮೆ ಸೆಂಟ್ರಲ್ ಪಾರ್ಕ್ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

dcm ashwathnarayan 2

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಾಗಲೇ ಅಲ್ಲಿ ಬೃಹತ್ ಪ್ರತಿಮೆ ಮತ್ತು ಸ್ಮಾರಕ ನಿರ್ಮಾಣ ಮಾಡಬೇಕು ಅಂತ ಪ್ರಸ್ತಾಪ ಇತ್ತು. ಸಿಎಂ ಯಡಿಯೂರಪ್ಪ 2019-20ನೇ ಸಾಲಿನ ಬಜೆಟ್‍ನಲ್ಲಿ ಇದಕ್ಕಾಗಿ ವಿಶೇಷ ಅನುದಾನ ಮೀಸಲಿಟ್ದಿದ್ದರು. ಈಗ ಡಿಸಿಎಂ ಅಶ್ವಥ್ ನಾರಾಯಣ ಅವರ ಕಾಳಜಿಯಿಂದ ಪ್ರತಿಮೆ ನಿರ್ಮಾಣ ಹಾಗೂ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಈ ಕಾಮಗಾರಿ ಪ್ರಾರಂಭವಾಗುತ್ತಿದೆ. ಐಡೆಕ್ ಸಂಸ್ಥೆ ಸೆಂಟ್ರಲ್ ಪಾರ್ಕ್ ನಿರ್ಮಾಣದ ಉಸ್ತುವಾರಿ ಹೊತ್ತಿದೆ. ಖ್ಯಾತ ಕಲಾವಿದ ರಾಮ್ ಸಿತಾರ್ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿದ್ದಾರೆ.

kempegowda 1

ಸೆಂಟ್ರಲ್ ಪಾರ್ಕ್ ಪ್ಲ್ಯಾನ್!
> ಸೆಂಟ್ರಲ್ ಪಾರ್ಕ್ ನಲ್ಲಿ ಕೆಂಪೇಗೌಡರು ನಿರ್ಮಿಸಿದ ನಗರದ ಐತಿಹಾಸಿಕ ಹೆಜ್ಜೆ ಗುರುತುಗಳನ್ನ ಈಗಿನ ಪೀಳಿಗೆಗೆ ಪರಿಚಯ ಮಾಡಿಸುವ ಕೆಲಸ ಮಾಡಲಾಗುತ್ತೆ.
> ವ್ಯಾಪಾರ, ವಾಣಿಜ್ಯ ಉದ್ದೇಶಕ್ಕಾಗಿ ಕೆಂಪೇಗೌಡರು ರಚಿಸಿದ್ದ ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ 64ಕ್ಕೂ ಹೆಚ್ಚು ಪೇಟೆಗಳ ಸೊಗಡು ಈ ಪಾರ್ಕ್ ನಲ್ಲಿ ಇರುತ್ತದೆ.
> ಉದ್ಯಾನವನದ ಪ್ರವೇಶ ದ್ವಾರದಲ್ಲಿ ಎರಡು ಎತ್ತರದ ಗೋಡೆಗಳು ಇರಲಿವೆ. ಇದನ್ನು ದಾಟಿ ಒಳಗೆ ಹೋಗುವ ಪ್ರವಾಸಿಗರಿಗೆ ಕೌತುಕ ಮೂಡಿಸುವ ಚಿತ್ರಗಳು ಕಲಾಕೃತಿಗಳು ಕಾಣಿಸಲಿವೆ.
> ಕೆಂಪೇಗೌಡರು ನಿರ್ಮಿಸಿದ್ದ ಮಣ್ಣಿನ ಗೋಡೆಗಳನ್ನು ನೆನಪಿಸುವ ಗೋಡೆಗಳು ಇರಲಿದೆ. ಇದಕ್ಕಾಗಿ ರಾಮ್ಡ್ ಅರ್ಥ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

kempegowda

> ಸೆಂಟ್ರಲ್ ಪಾರ್ಕ್ ಮಧ್ಯದಲ್ಲಿ ಚಕ್ರಾಕಾರದ ನೀರಿನ ಸಂಗ್ರಹಗಾರ ಇರಲಿದೆ. ಇವು ಕೆಂಪೇಗೌಡರು ನಿರ್ಮಿಸಿದ್ದ ಕಾಲುವೆ ಹಾಗೂ ಕೆರೆಗಳ ವಿನ್ಯಾಸದ ತದ್ರೂಪವಾಗಿರುತ್ತದೆ.
> ನೀರಿನ ಸಂಗ್ರಹಗಾರದ ಸುತ್ತ ತೆರೆದುಕೊಳ್ಳುವ ದಾರಿಗಳು ಚಕ್ರದ ವಿನ್ಯಾಸದಲ್ಲಿ ಇರಲಿದೆ. ಚಕ್ರದ ಕಡ್ಡಿಗಳಂತೆ ಹೊರಭಾಗಕ್ಕೆ ಈ ದಾರಿಗಳು ಮಧ್ಯೆ ಭಾಗಕ್ಕೆ ತೆರೆದುಕೊಳ್ಳಲಿದೆ.
> ಪ್ರತಿಮೆ ಸುತ್ತ ಪೀಠ ಮತ್ತು ಅದರ ಜಗಲಿಯಂತಹ ಪ್ರದೇಶವನ್ನು ವಸುಂದರ ವಿವರಣಾತ್ಮಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತೆ.
> ಪ್ರತಿಮೆ ಸ್ಥಳದಲ್ಲಿ ಮಾಹಿತಿ ಫಲಕ, ಭಿತ್ತಿಚಿತ್ರಗಳ ಮೂಲಕ ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನ ಬಣ್ಣಿಸಲಾಗುತ್ತೆ. ಜೊತೆ ಕೆಂಪೇಗೌಡರ ಐತಿಹಾಸಿಕ ಮಹತ್ವ ಮತ್ತು ದೂರದೃಷ್ಟಿಯ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತೆ.
> ಸೆಂಟ್ರಲ್ ಪಾರ್ಕ್ ನಮ್ಮ ರಾಜ್ಯದ ಧ್ವಜದ ಸಂಕೇತವಾಗಿರುವ ಅರಿಶಿಣ, ಕುಂಕುಮ ಬಣ್ಣಗಳನ್ನು ಒಳಗೊಂಡಿರುತ್ತದೆ.

TAGGED:airportbengaluruC. N. Ashwath NarayanDCMKarnataka GovernmentNadaprabhu KempegowdaPublic TVಡಿಸಿಎಂ ಅಶ್ವತ್ಥನಾರಾಯಣನಾಡಪ್ರಭು ಕೆಂಪೇಗೌಡಪಬ್ಲಿಕ್ ಟಿವಿಪ್ರತಿಮೆಬೆಂಗಳೂರುವಿಮಾನ ನಿಲ್ದಾಣ
Share This Article
Facebook Whatsapp Whatsapp Telegram

Cinema news

Dhurandhar Movie
ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?
Cinema Latest Top Stories
Premi Movie 2
`ಪ್ರೇಮಿ’ಗಾಗಿ ಮೊದಲ ಹಾಡು ಬಿಡುಗಡೆ
Cinema Latest Sandalwood
MB Khazima
ವಿಶ್ವ ಚಾಂಪಿಯನ್ ಖಾಜಿಮಾ ಬಯೋಪಿಕ್‌ಗೆ ಚಾಲನೆ
Cinema Latest Sandalwood South cinema Top Stories
Dhruva sarja
ರಂಗನತಿಟ್ಟು ಪಕ್ಷಿಧಾಮದ ಕಾರ್ಮಿಕರಿಗೆ ಧ್ರುವ ಸಹಾಯಹಸ್ತ – ರಿಯಲ್‌ ಹೀರೋ ಅಂದ್ರು ಫ್ಯಾನ್ಸ್‌
Cinema Latest Sandalwood Top Stories

You Might Also Like

DK Shivakumar 4
Bengaluru City

Video | ದೆಹಲಿಗೆ ಬಂದಿಳಿದ ಡಿಕೆಶಿ – ಸೋನಿಯಾ ಗಾಂಧಿ ಭೇಟಿ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿಸಿಎಂ

Public TV
By Public TV
7 hours ago
New Year
Bengaluru City

ನ್ಯೂ ಇಯರ್‌ ಪಾರ್ಟಿಗೆ ಪಬ್‌ ಬುಕ್‌ ಮಾಡೋ ಮುನ್ನ ಎಚ್ಚರ – ಏಕೆ ಗೊತ್ತೇ?

Public TV
By Public TV
7 hours ago
Lionel Messi 2 1
Latest

ರಾಹುಲ್‌ ಗಾಂಧಿಗೆ ತನ್ನ ಜೆರ್ಸಿ ಗಿಫ್ಟ್‌ – ಸಿಎಂ ರೆಡ್ಡಿ ಜೊತೆ ಫುಟ್ಬಾಲ್ ಆಡಿದ ಮೆಸ್ಸಿ

Public TV
By Public TV
7 hours ago
big bulletin 13 December 2025 part 1
Big Bulletin

ಬಿಗ್‌ ಬುಲೆಟಿನ್‌ 13 December 2025 ಭಾಗ-1

Public TV
By Public TV
8 hours ago
big bulletin 13 December 2025 part 2
Big Bulletin

ಬಿಗ್‌ ಬುಲೆಟಿನ್‌ 13 December 2025 ಭಾಗ-2

Public TV
By Public TV
8 hours ago
big bulletin 13 December 2025 part 3
Big Bulletin

ಬಿಗ್‌ ಬುಲೆಟಿನ್‌ 13 December 2025 ಭಾಗ-3

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?