Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಡಿ ಬಾಸ್ ಫ್ಯಾನ್ಸ್

Public TV
Last updated: March 27, 2020 8:24 pm
Public TV
Share
2 Min Read
darshan fans
SHARE

– ಹಸಿದವರಿಗೆ ಊಟ, ಉಚಿತ ಅಂಬುಲೆನ್ಸ್ ವ್ಯವಸ್ಥೆ

ಬೆಂಗಳೂರು: ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಹಸಿದವರಿಗೆ ನೆರವು ನೀಡಲು ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮುಂದೆ ಬಂದಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತು ಹಸಿದವರಿಗೆ ಊಟದ ವ್ಯವಸ್ತೆಯನ್ನು ಮೈಸೂರಿನ ಡಿಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ಆರೋಗ್ಯದ ತೊಂದರೆಯಾದರೆ ಅಂತವರಿಗೆ ನೆರವಾಗಲು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಡಿಬಾಸ್ ಅಭಿಮಾನಿಗಳು ರಾತ್ರಿ ಕೂಡ ಹಸಿದವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಸಹಕಾರದೊಂದಿಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಮೈಸೂರು ನಾಗರಾಜ್ ( ರಾಜ್ಯಉಪಾಧ್ಯಕ್ಷರು ) ನೇತೃತ್ವದಲ್ಲಿ ಇಂದು ಸಹ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ ಜೊತೆಗೆ EMERGENCY ಗಾಗಿ ಆಂಬುಲೆನ್ಸ್ ಸೌಲಭ್ಯ ಸಹ ಮಾಡಲಾಗಿದೆ pic.twitter.com/EsSPAvo1dx

— D Company(R)Official (@Dcompany171) March 27, 2020

ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನ ಸಹಕಾರದೊಂದಿಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಮೈಸೂರು ನಾಗರಾಜ್ (ರಾಜ್ಯಉಪಾಧ್ಯಕ್ಷರು) ನೇತೃತ್ವದಲ್ಲಿ ಇಂದು ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ ಜೊತೆಗೆ ತುರ್ತುಪರಿಸ್ಥಿತಿಗಾಗಿ ಅಂಬುಲೆನ್ಸ್ ಸೌಲಭ್ಯ ಸಹ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ -ಮೈಸೂರು ಇವರ ವತಿಯಿಂದ ರಾತ್ರಿಯು ಕೂಡ 500ಕ್ಕೂ ಹೆಚ್ಚು ಜನಕ್ಕೆ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮೈಸೂರಿನಲ್ಲಿ ಇಂದು ಮಾಡಲಾಯಿತು pic.twitter.com/V6n7bQryIy

— D Company(R)Official (@Dcompany171) March 26, 2020

ರಾತ್ರಿ ಸಮಯದಲ್ಲೂ ಊಟ ಮಾಡದೇ ಇರುವವರ ಸಹಾಯಕ್ಕೆ ಬಂದಿರುವ ಡಿಬಾಸ್ ಅಭಿಮಾನಿಗಳು, ರಾತ್ರಿಯೂ ಸಹ ಊಟ ವಿತರಣೆ ಮಾಡಿದ್ದಾರೆ. ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ -ಮೈಸೂರು ಇವರ ವತಿಯಿಂದ ರಾತ್ರಿಯು ಕೂಡ 500ಕ್ಕೂ ಹೆಚ್ಚು ಜನಕ್ಕೆ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮೈಸೂರಿನಲ್ಲಿ ಮಾಡಲಾಗಿದೆ ಎಂದು ಡಿಬಾಸ್ ಫ್ಯಾನ್ ಗ್ರೂಪ್ ಟ್ವಿಟ್ಟರ್‍ನಲ್ಲಿ ತಿಳಿಸಿದೆ.

ಜೊತೆಗೆ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರು ನಗರದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಕೂಲಿನಾಲಿಗಾಗಿ ಮೈಸೂರಿಗೆ ಬಂದು ಹೊರಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣ, ರಸ್ತೆಬದಿಯಲ್ಲಿ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು ಮತ್ತು ಮಹಿಳೆಯರಿಗೆ ಚೆಲುವಾಂಬ ಆಸ್ಪತ್ರೆ ಮುಂಭಾಗ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ -ಮೈಸೂರು ಇವರ ವತಿಯಿಂದ
ಇಂದು ಮೈಸೂರು ನಗರದಲ್ಲಿ ಕೋವಿಡ್ 19 ರ ಲಾಕ್ ಡೌನ್ ನಡುವೆ ಕೂಲಿನಾಲಿಗಾಗಿ ಮೈಸೂರಿಗೆ ಬಂದು ಹೊರಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣ,ರಸ್ತೆಬದಿಯಲ್ಲಿ ಅತಂತ್ರವಾಗಿದ್ದ ನಿರ್ಗತಿಕರು,ಅಸಹಾಯಕರು,ಅಶಕ್ತರು,ವಯೋವೃದ್ಧರು,ಮಾನಸಿಕ ಅಸ್ವಸ್ಥರು,ಮಹಿಳೆಯರಿಗೆ pic.twitter.com/X6mFQTXprE

— D Company(R)Official (@Dcompany171) March 26, 2020

ಇದರ ಜೊತೆಗೆ ಈ ಲಾಕ್‍ಡೌನ್ ಮುಗಿಯುವವರೆಗೂ ಇದೇ ರೀತಿ ಮಾಡಲು ನಿರ್ಧರಿಸಿರುವ ದರ್ಶನ್ ಅಭಿಮಾನಿಗಳು, ಸರ್ಕಾರದ ಆದೇಶದಂತೆ ಲಾಕ್ ಡೌನ್ ಮುಗಿಯುವ ತನಕ ಸಹಾಯ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘ ತೀರ್ಮಾನಿಸಿದೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆವಾದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕೂಡ ಮನವಿ ಮಾಡಲಾಗಿದೆ.

TAGGED:ambulanceCoronaDarshan FanshelpMealsmysorePublic TVಅಂಬುಲೆನ್ಸ್ಊಟಕೊರೊನಾದರ್ಶನ್ ಫ್ಯಾನ್ಸ್ಪಬ್ಲಿಕ್ ಟಿವಿಮೈಸೂರುಸಹಾಯ
Share This Article
Facebook Whatsapp Whatsapp Telegram

You Might Also Like

Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
54 seconds ago
WTC SA 3
Cricket

ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

Public TV
By Public TV
6 minutes ago
Chikkodi Crime
Belgaum

ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Public TV
By Public TV
8 minutes ago
Untitled 1 copy
Latest

11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

Public TV
By Public TV
37 minutes ago
Mallikarjun Kharge
Latest

ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

Public TV
By Public TV
37 minutes ago
Indian Embassy Israel
Latest

ಇಸ್ರೇಲ್ – ಇರಾನ್ ಸಂಘರ್ಷ | 24×7 ಸಹಾಯವಾಣಿ ಆರಂಭಿಸಿದ ಭಾರತ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?