ಮಂಗಳೂರು: ಮಾರಕ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಜನನಿಬಿಡ ಪ್ರದೇಶಗಳಾದ ಮಾಲ್, ಥಿಯೇಟರ್ ಸೇರಿದಂತೆ ಕ್ಲಬ್, ಪಬ್ಗಳನ್ನು ಒಂದು ವಾರಗಳ ಕಾಲ ಬಂದ್ ಮಾಡಿದೆ. ಆದರೆ ಇದೀಗ ಈ ಕರ್ನಾಟಕ ಬಂದ್ನ ಅವಧಿ ವಿಸ್ತರಿಸುವ ಸಾಧ್ಯತೆ ಕಂಡು ಬಂದಿದೆ.
ಆರೋಗ್ಯ ಸಚಿವ ಶ್ರೀರಾಮುಲು ಅವರು ಬಂದ್ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ಇದೇ ಸ್ಥಿತಿ ಮುಂದುವರಿದರೆ ಬಂದ್ ಅನಿವಾರ್ಯ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ಹಾಗೂ ಅನಿವಾರ್ಯ ಪರಿಸ್ಥಿತಿ ಎದುರಾದರೆ ಬಂದ್ ಮುಂದುವರಿಯುತ್ತೆ ಎಂದಿದ್ದಾರೆ. ಈ ಬಗ್ಗೆ ಸಿಎಂ ಸಭೆ ನಡೆಸಲಿದ್ದಾರೆ ಬಂದ್ ಮತ್ತೆ ವಿಸ್ತರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಂದ್ ವೇಳೆ ಜನ ಪಿಕ್ನಿಕ್ಗೆ ಹೋಗಬೇಡಿ, ಆರೋಗ್ಯದ ಬಗ್ಗೆ ನಿಗಾ ಇಡಿ ಎಂಬ ಸಲಹೆಯನ್ನು ಕೂಡ ಅವರು ನೀಡಿದ್ದಾರೆ.