ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ: ಶಿವಣ್ಣ

Public TV
1 Min Read
shivanna

– ಕೃಷಿ ಮೇಳಕ್ಕೆ ಆಹ್ವಾನ ನೀಡಿದ ಹ್ಯಾಟ್ರಿಕ್ ಹೀರೊ

ಬೆಂಗಳೂರು: ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ. ಎಲ್ಲ ರೈತರಿಗೆ ನನ್ನ ಸಲಾಂ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ಶಿವಣ್ಣ ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಾಕಿಕೊಂಡಿದ್ದು, ಈ ವಿಡಿಯೋದಲ್ಲಿ ರೈತರ ಬಗ್ಗೆ ಮಾತನಾಡಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಕೃಷಿ ಮೇಳಕ್ಕೆ ಎಲ್ಲರೂ ಬರಬೇಕು. ಜೊತೆಗೆ ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ. ಎಲ್ಲ ರೈತರಿಗೆ ನನ್ನ ಸಲಾಂ ಎಂದು ಬರೆದುಕೊಂಡಿದ್ದಾರೆ.

ರಾಜ್ಯ ಮಟ್ಟದ ಚಂದ್ರ ಸ್ಮರಣೆ ಕೃಷಿ ಮೇಳ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಗ್ರಾಮದಲ್ಲಿ ಮಾರ್ಚ್ 5, 6 ಹಾಗೂ 7 ರಂದು ನಡೆಯಲಿದೆ. ಈ ಕೃಷಿ ಮೇಳಕ್ಕೆ ನಾನು ಬರುತ್ತಿದ್ದೇನೆ. ನೀವು ಎಲ್ಲರೂ ಬರಬೇಕು ಈ ರೈತ ಸಮಾರಂಭವನ್ನು ಯಶಸ್ವಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಶಿವಣ್ಣ ಅವರು ಸಾಲು ಸಾಲು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತಿಚೇಗೆ ಅವರ ಅಭಿನಯದ ಆರ್‌ಡಿಕ್ಸ್ ಸಿನಿಮಾ ಸೆಟ್ಟೇರಿದೆ. ಕಳೆದ ತಿಂಗಳ ಫೆಬ್ರವರಿ 19 ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಕಾರ್ಯ ನಡೆಯಿತು. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

SHIVANNA 1

ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ತಮಿಳು ನಿರ್ದೇಶಕ ರವಿ ಅರಸು ಅವರು ಕನ್ನಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಆಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರವಿ ಅರಸು ಮತ್ತು ಶಿವಣ್ಣನ ಕಾಂಬಿನೇಷನ್ ನಿರೀಕ್ಷೆ ಹೆಚ್ಚು ಮಾಡುವಂತೆ ಮಾಡಿದ್ದು, ಅವರ ಅಭಿಮಾನಿಗಳು ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *