Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಬಾಂಗ್ಲಾ ಕ್ರಿಕೆಟ್ ತಂಡದಿಂದ 2 ದಿನದಲ್ಲಿ ಎರಡು ಬಾರಿ ಅನುಚಿತ ವರ್ತನೆ

Public TV
Last updated: February 10, 2020 5:52 pm
Public TV
Share
3 Min Read
Bangladesh
SHARE

– ಈವರೆಗೆ 9 ಬಾರಿ ಮುಜುಗುರಕ್ಕೀಡಾದ ಬಾಂಗ್ಲಾ ಕ್ರಿಕೆಟ್ ತಂಡ
– ಬಾಂಗ್ಲಾ ಕ್ರಿಕೆಟ್ ತಂಡದ ಹಿರಿಯರ ಮಾರ್ಗದಲ್ಲಿ ಕಿರಿಯರು

ಪೋಷೆಫ್‍ಸ್ಟ್ರೋಮ್: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಟಗಾರರು ಎರಡು ದಿನಗಳಲ್ಲಿ ತಮ್ಮ ಕೆಟ್ಟ ವರ್ತನೆಯಿಂದ ದೇಶವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಪೋಷಫ್‍ಸ್ಟ್ರೋಮ್‍ನಲ್ಲಿ ಭಾನುವಾರ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಬಾಂಗ್ಲಾ ಗೆದ್ದುಕೊಂಡಿದೆ. ಆದರೆ ಗೆಲುವಿನ ಸಂಭ್ರಮದ ವೇಳೆ ಭಾರತದ ಅಂಡರ್ 19 ಕ್ರಿಕೆಟ್ ತಂಡದ ಆಟಗಾರರೊಂದಿಗೆ ಕೆಟ್ಟದಾಗಿ ವರ್ತಿಸಿತು. ಇದಕ್ಕೂ ಮುನ್ನ ಶನಿವಾರ ಬಾಂಗ್ಲಾದೇಶದ ಹಿರಿಯರ ಕ್ರಿಕೆಟ್ ತಂಡದ ವೇಗದ ಬೌಲರ್ ಅಬು ಜಾಯೆದ್ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿಯನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿ ಸಂಭ್ರಮ ತೋರಿದರು. ಇದನ್ನೂ ಓದಿ: ಸಕ್ಸೇನಾ ತಲೆಗೆ ಬಾಲ್ ಎಸೆದ ಬಾಂಗ್ಲಾ ಬೌಲರ್- ಕ್ಷಮೆಯಾಚಿಸಲು ನಕಾರ

India Bangladesh U 19 World Cup

ಅಬು ಜಾಯೆದ್ ವರ್ತನೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಜಾಯೆದ್ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಇನ್ನಿಂಗ್ಸ್ ಮತ್ತು 44 ರನ್‍ಗಳಿಂದ ಜಯಗಳಿಸಿದೆ.

ಡಿಮೆರಿಟ್ ಪಾಯಿಂಟ್ ಅಂದ್ರೇನು?:
ಯಾವುದೇ ಆಟಗಾರ ಐಸಿಸಿ ನಿಯಮವಾಳಿ ದಾಟಿ ಎದುರಾಳಿ ತಂಡ ಹಾಗೂ ಆಟಗಾರರ ವಿರುದ್ಧ ಅಸಭ್ಯವಾಗಿ ವರ್ತನೆ, ನಿಂದನೆ ಮಾಡಿದರೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಒಬ್ಬ ಆಟಗಾರ 24 ತಿಂಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‍ಗಳನ್ನು ಹೊಂದಿದ್ದರೆ ಆ ಆಟಗಾರ ಕ್ರಿಕೆಟ್ ನಿಬರ್ಂಧನಕ್ಕೆ ತುತ್ತಾಗುತ್ತಾನೆ. ಅಷ್ಟೇ ಅಲ್ಲದೆ ಎರಡು ಡಿಮೆರಿಟ್ ಪಾಯಿಂಟ್ ಪಡೆದರೆ ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯ ಅಥವಾ ಎರಡು ಟಿ20 ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನೆ.

Abu Jayed

ಅಂಡರ್-19 ವಿಶ್ವಕಪ್ ಗೆದ್ದ ನಂತರ ಬಾಂಗ್ಲಾದೇಶದ ಆಟಗಾರರು ಪಿಚ್ ಬಳಿ ತಲುಪಿ ಭಾರತೀಯ ಆಟಗಾರರ ಮಧ್ಯ ಪ್ರವೇಶಿಸುವ ಮೂಲಕ ಸಂಭ್ರಮಿಸಲು ಪ್ರಾರಂಭಿಸಿದರು. ಈ ಪೈಕಿ ಓರ್ವ ಆಟಗಾರ ಭಾರತೀಯ ಕ್ರಿಕೆಟಿಗರ ಮುಂದೆ ನಿಂತು ನಿಂದನೆ ಮಾಡಲು ಪ್ರಾರಂಭಿಸಿದನು. ಇದರಿಂದಾಗಿ ಕೋಪಗೊಂಡ ಭಾರತೀಯ ಆಟಗಾರರೊಬ್ಬರು ಆತನಿಗೆ ಥಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ಗಳು ಆಟಗಾರರನ್ನು ಪರಸ್ಪರ ದೂರವಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಆಟಗಾರರ ಅಸಭ್ಯ ವರ್ತನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿದೆ.

7 ಬಾರಿ ಮುಜುಗರಕ್ಕೊಳಗಾದ ಬಾಂಗ್ಲಾ ತಂಡ:
ಅಂಡರ್ 19 ವಿಶ್ವಕಪ್ ಹಾಗೂ ಪಾಕಿಸ್ತಾನ ವಿರುದ್ಧದ ಈಗಿನ ಟೆಸ್ಟ್ ಪಂದ್ಯ ಹೊರತಾಗಿ ಬಾಂಗ್ಲಾದೇಶದ ಕ್ರಿಕೆಟ್ ತಂಡವು ಈ ಹಿಂದೆ ಒಟ್ಟು 9 ಬಾರಿ ಮುಜುಗುರಕ್ಕೆ ಈಡಾಗಿದೆ. ಹಿರಿಯರ ಮಾರ್ಗದಲ್ಲಿಯೇ ಕಿರಿಯರು ಕೂಡ ನಡೆಯುತ್ತಿದ್ದಾರೆ, ಅವರಂತೆಯೇ ಅನೂಚಿತ ವರ್ತನೆ ತೋರುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.

Shakib Al Hassan

2019ರಲ್ಲಿ ಭಾರತ ಪ್ರವಾಸಕ್ಕೂ ಮುನ್ನ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್-ಹಸನ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2 ವರ್ಷಗಳ ಕಾಲ ನಿಷೇಧಿಸಿತ್ತು. ಐಪಿಎಲ್ ಸೇರಿದಂತೆ ಬುಕ್ಕಿಯಿಂದ ಅವರಿಗೆ ಮೂರು ಬಾರಿ ಆಫರ್ ನೀಡಲಾಗಿತ್ತು. ಆದರೆ ಈ ಮಾಹಿತಿಯನ್ನು ಶಕೀಬ್ ಐಸಿಸಿ ಗಮನಕ್ಕೆ ತರದೆ ಇದ್ದಿದ್ದರಿಂದ ತಪ್ಪಿತಸ್ಥನೆಂದು ಹೇಳಲಾಗಿತ್ತು.

2018ರ ಜನವರಿಯಲ್ಲಿ ಶಬ್ಬೀರ್ ರಹಮಾನ್ ತವರು ಪಂದ್ಯವೊಂದರಲ್ಲಿ ಕ್ರಿಕೆಟ್ ಅಭಿಮಾನಿಯನ್ನು ತೀವ್ರವಾಗಿ ನಿಂದಿಸಿದ್ದರು. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಶಬ್ಬೀರ್ ಅಂಪೈರ್ ಅನುಮತಿ ಪಡೆದು ಮೈದಾನದಿಂದ ಹೊರ ಬಂದಿದ್ದರು. ನಂತರ ಅಭಿಮಾನಿಯನ್ನು ಎಳೆದೊಯ್ದು ಹೊಡೆದಿದ್ದರು. ಇದರಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಬ್ಬೀರ್ ಅವರನ್ನು ಅಮಾನತುಗೊಳಿಸಿತ್ತು.

Bangladesh A

2018ರಲ್ಲಿ ನಡೆದ ನಿಡಾಹಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಶ್ರೀಲಂಕಾ ಸೋತಿತ್ತು. ವಿಜಯದ ನಂತರ ಬಾಂಗ್ಲಾದೇಶದ ಆಟಗಾರರು ಮೈದಾನದಲ್ಲಿ ನಾಗಿಣಿ ನೃತ್ಯವನ್ನು ಪ್ರದರ್ಶಿಸಿದ್ದರು. ಇದರ ನಂತರ ತಮೀಮ್ ಇಕ್ಬಾಲ್ ಅವರು ಮೈದಾನದಿಂದ ಹೊರಬರುವಾಗ ಕುಸಾಲ್ ಮೆಂಡಿಸ್ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಬಾಂಗ್ಲಾದೇಶದ ಆಟಗಾರರು ಸಹ ಕಿತ್ತಾಡಿಕೊಂಡಿದ್ದರು.

2016ರಲ್ಲಿ ನಡೆದ ಏಷ್ಯಾಕಪ್ ಸಮಯದಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬರು ನಾಚಿಕೆಗೇಡಿನ ಕೃತ್ಯ ಎಸಗಿದ್ದರು. ಅವರು ಮಹೇಂದ್ರ ಸಿಂಗ್ ಧೋನಿ ಅವರ ತಲೆಯನ್ನು ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಕೈಯಲ್ಲಿ ಹಿಡಿದಿದ್ದ ಹಾಗೆ ಫೋಟೋವನ್ನು ಬಿಂಬಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

Bangladesh B

2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಪೆವಿಲಿಯನ್‍ನ ಮುಂದೆ ತೊಡೆ ತಟ್ಟಿದ್ದರು. ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಶಿಸ್ತು ಕ್ರಮ ಕೈಗೊಂಡು ಶಕೀಬ್‍ಗೆ 3 ಏಕದಿನ ನಿಷೇಧ ಮತ್ತು 3 ಲಕ್ಷ ದಂಡ ವಿಧಿಸಿತ್ತು.

TAGGED:bangladeshCricket PlayerPublic TVtest matchUnder-19 World Cupಅಂಡರ್-19 ವಿಶ್ವಕಪ್ಐಸಿಸಿಡಿಮೆರಿಟ್ ಪಾಯಿಂಟ್ಪಬ್ಲಿಕ್ ಟಿವಿಬಾಂಗ್ಲಾದೇಶಭಾರತ
Share This Article
Facebook Whatsapp Whatsapp Telegram

Cinema Updates

rakshak bullet
ಸತ್ಯ ಒಪ್ಪಿಕೊಂಡ ರಕ್ಷಕ್: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?
Bengaluru City Cinema Districts Latest Top Stories
ramya 5 2
ನಿಮ್ಮಿಂದಲೇ ಹೆಣ್ಮಕ್ಕಳಿಗೆ ದೌರ್ಜನ್ಯ – ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕೆಂಡಾಮಂಡಲ
Bengaluru City Cinema Latest Main Post
Rashmika Mandannas New Film Mysaa Launched with a Traditional Pooja Muhurta program 2
ರಶ್ಮಿಕಾ ಮಂದಣ್ಣ ನಟನೆಯ ಮೈಸಾ ಚಿತ್ರಕ್ಕೆ ಮುಹೂರ್ತ- ಗೋಂಡ್ ಹಾಡಿಗೆ ಡಾನ್ಸ್
Cinema Latest South cinema
Darshan The Devil
ʼದಿ ಡೆವಿಲ್ʼ ಶೂಟಿಂಗ್ ಮುಕ್ತಾಯ : ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು
Cinema Latest Sandalwood Top Stories
just married
ಶೈನ್ ಶೆಟ್ಟಿಯ ಜಸ್ಟ್ ಮ್ಯಾರೀಡ್‌ಗೆ ಡೇಟ್ ಫಿಕ್ಸ್
Cinema Latest Sandalwood Top Stories

You Might Also Like

01 12
Big Bulletin

ಬಿಗ್‌ ಬುಲೆಟಿನ್‌ 27 July 2025 ಭಾಗ-1

Public TV
By Public TV
6 hours ago
02 14
Big Bulletin

ಬಿಗ್‌ ಬುಲೆಟಿನ್‌ 27 July 2025 ಭಾಗ-2

Public TV
By Public TV
6 hours ago
IND vs ENG 4th test Ben Stokes offers a draw India denies and continues to bat
Cricket

ಬೆನ್‌ ಸ್ಟೋಕ್ಸ್‌ ಡ್ರಾ ಆಫರ್‌ ರಿಜೆಕ್ಟ್‌ – ಬ್ಯಾಟಿಂಗ್‌ ಮುಂದುವರಿಸಿ ಚಮಕ್‌ ಕೊಟ್ಟ ಜಡೇಜಾ, ಸುಂದರ್‌

Public TV
By Public TV
7 hours ago
Mallikarjun Kharge 3
Districts

ಕಷ್ಟ ಪಟ್ಟಿದ್ದು ನಾನು, ಕೃಷ್ಣ ಸಿಎಂ ಆದ್ರು – ಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ಖರ್ಗೆ ಬಹಿರಂಗ ಬೇಸರ

Public TV
By Public TV
7 hours ago
Ravindra Jadeja Washington Sundar
Cricket

ಜಡೇಜಾ, ಸುಂದರ್‌ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್‌ ಅಂತ್ಯ

Public TV
By Public TV
7 hours ago
Chikkamagaluru Elephant Attack
Chikkamagaluru

ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?