ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿನ ಬಾಲಕಿಯರ ವಸತಿ ನಿಲಯಕ್ಕೆ ತೇರದಾಳ ಶಾಸಕ ಸಿದ್ದು ಸವದಿ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಈ ವೇಳೆ ಮಹಿಳಾ ಹಾಸ್ಟೆಲ್ ಅವ್ಯವಸ್ಥೆ ಕಂಡು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಎದುರು ಬಾಲಕಿಯರು ಹಾಸ್ಟೆಲ್ ನಲ್ಲಿ ತಾವು ಅನುಭವಿಸುತ್ತಿರುವ ಕಷ್ಟಗಳನ್ನ ತೋಡಿಕೊಂಡರು. ವಿದ್ಯಾರ್ಥಿನಿಯರು ಈ ಹಾಸ್ಟೆಲ್ ನಲ್ಲಿ ಇರುವ ಕಾರಣ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದರು.
ನಮಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಶುದ್ಧ ಕುಡಿಯುವ ನೀರು ಕೊಡಲ್ಲ. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕೊಡಬೇಕಾದ ಯಾವುದೇ ಸೌಲಭ್ಯ ಕೊಡ್ತಿಲ್ಲವೆಂದು ಶಾಸಕರ ಮುಂದೆ ಗೋಳು ತೋಡಿಕೊಂಡರು. ಸರ್ಕಾರದ ಅನುದಾನ ಪಡೆದು ಎನ್ಜಿಓ ನಡೆಸುತ್ತಿರುವ ಹಾಸ್ಟೆಲ್ ಇದಾಗಿದೆ. ಈ ವೇಳೆ 20 ವಿದ್ಯಾರ್ಥಿನಿಯರು ಇದ್ದರೂ 50 ಜನರ ಹಾಜರಿ ಹಾಕಿದ್ದ ವಾರ್ಡನ್ ಭಾರತಿ ಸಂತಿಮಠ ಅವರ ಕ್ರಮಕ್ಕೆ ಗರಂ ಆದರು. ವಿದ್ಯಾರ್ಥಿನಿಯರಿಗೆ ಸರಿಯಾಗಿ ಸೌಲಭ್ಯ ಕಲ್ಪಿಸಿ ಎಂದು ತಾಕೀತು ಮಾಡಿದ್ರು.