ಏಕವಚನದಲ್ಲಿ ಮಾತಾಡಲು ಇಷ್ಟವಿಲ್ಲ, ಕೆಲವು ಬಾರಿ ಹೀಗಾಗುತ್ತೆ- ಸತೀಶ್ ಜಾರಕಿಹೊಳಿ

Public TV
1 Min Read
Satish Ramesh Jarkiholi

ಬೆಳಗಾವಿ: ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಮಾತಾಡಿದ್ದರ ಕುರಿತು ಬಿಜೆಪಿಯವರು ದೂರು ನೀಡಿರುವುದರ ಕುರಿತು ಗೋಕಾಕ್ ನಲ್ಲಿ ಮತನಾಡಿದರು. ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ. ದೂರು ಣಿಢೀ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂದುಕೊಳ್ಳುವುದಿಲ್ಲ. ಚುನಾವಣೆ ಇಲಾಖೆಯವರು ಸಹ ಏಕವಚನದಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಆದರೂ ರಾಜಕೀಯದಲ್ಲಿ ಕೆಲವು ಮಾತುಗಳು ಬರುತ್ತವೆ ಎಂದರು.

BJP SULLAI 1

ನಾನು ಸಲ್ಲಿಸಿದ ನಾಮಪತ್ರಕ್ಕೆ ಬಿ ಫಾರಂ ಇರಲಿಲ್ಲ ಹೀಗಾಗಿ ನಾಮಪತ್ರ ತಿರಸ್ಕಾರ ಆಗಿದೆ. ನಮ್ಮ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ವಿರುದ್ಧ ಹಾಡಿನ ಮೀಮ್ಸ್ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಮಿಡಿಯಾಗಿರಲಿ ಜನ ಡೈವರ್ಟ್ ಆಗಲಿ ಎಂದು ಈ ರೀತಿ ಮಾಡಿದ್ದೇವೆ. ಅಲ್ಲದೆ ಆತ ಹೇಳಿದ್ದಕ್ಕೂ ಆ ವಿಡಿಯೋ ಮ್ಯಾಚ್ ಆಯ್ತು ಹೀಗಾಗಿ ಮೀಮ್ಸ್ ಮಾಡಿದ್ದೆವು ಎಂದರು.

ಜಾರಕಿಹೊಳಿ ಬ್ರದರ್ಸ್ ಒಂದೇ ಎಂದು ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಬಿಂಬಿಸಿ ಲಾಭ ಪಡೆಯಲು ಯೋಚಿಸುತ್ತಿದ್ದಾರೆ. ಜನರು ಈಗ ಅವರ ಮಾತನ್ನು ನಂಬುವುದಿಲ್ಲ. ಗೋಕಾಕ್ ನಲ್ಲಿ ರಾಜಕೀಯ ಬದಲಾವಣೆ, ಎಲ್ಲರಿಗೂ ಸಮಾನತೆ ಆಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *