Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆ ನಾಯಿಗಳನ್ನ ಓಡಿಸಬೇಕಲ್ಲಾ, ನೀನು ಆ ನಾಯಿಗಳನ್ನ ಓಡಿಸಬೇಕು – ಮಹಿಳೆಯ ಜೊತೆ ಸತೀಶ್ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಆ ನಾಯಿಗಳನ್ನ ಓಡಿಸಬೇಕಲ್ಲಾ, ನೀನು ಆ ನಾಯಿಗಳನ್ನ ಓಡಿಸಬೇಕು – ಮಹಿಳೆಯ ಜೊತೆ ಸತೀಶ್ ಮಾತು

Belgaum

ಆ ನಾಯಿಗಳನ್ನ ಓಡಿಸಬೇಕಲ್ಲಾ, ನೀನು ಆ ನಾಯಿಗಳನ್ನ ಓಡಿಸಬೇಕು – ಮಹಿಳೆಯ ಜೊತೆ ಸತೀಶ್ ಮಾತು

Public TV
Last updated: November 6, 2019 8:58 pm
Public TV
Share
2 Min Read
bgk satish jarkoholi
SHARE

ಬೆಳಗಾವಿ: ಆ ನಾಯಿಗಳನ್ನು ನೀವು ಓಡಿಸಬೇಕಲ್ಲಾ, ಕಲ್ಲು ತಗೋಂಡು ಅಂತಹ ನಾಯಿಗಳನ್ನು ಓಡಿಸಿದರೆ ನಾವು ಗಟ್ಟಿಯಾಗುತ್ತೇವೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ದಬ್ಬಾಳಿಕೆ ವಿರುದ್ಧ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ.

ಗೋಕಾಕ್ ತಾಲೂಕಿನ ಪಾಮಲದಿನ್ನಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬಳಿ ಸ್ಥಳೀಯ ಮಹಿಳೆ ಕಮಲವ್ವಾ ನಿರ್ವಾಣಿ ಅಳಲು ತೊಡಗಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಅಳಲು ತೊಡಿಕೊಳ್ಳಲು ಹೋದರೆ ಬೆಂಬಲಿಗರು ಹುಚ್ಚು ನಾಯಿಗೆ ಕಲ್ಲು ಎಸೆದಂತೆ ನಡೆಯಿರಿ ಎಂದು ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಮೇಶ್ ಬೆಂಬಲಿಗರಿಂದಾಗಿ ಗೋಕಾಕ್ ಕ್ಷೇತ್ರದಲ್ಲಿ ಬಡವರಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕಮಲವ್ವಾ ಹೇಳಿದ್ದಕ್ಕೆ, ಇಂತಹ ನಾಯಿಗಳನ್ನು ಕಲ್ಲಿನಲ್ಲಿ ಹೊಡೆದು ಓಡಿಸಬೇಕು ಎಂದು ಹೇಳುವ ಮೂಲಕ ರಮೇಶ್ ಅಳಿಯ ಅಂಬಿರಾವ್ ಮತ್ತು ಬೆಂಬಲಿಗರನ್ನು ಸತೀಶ್ ಜಾರಕಿಹೊಳಿ ನಾಯಿಗೆ ಹೋಲಿಸಿದ್ದಾರೆ.

Ramesh Jarkiholi

ನಾವು ಮನವಿ ಮಾಡಿದರೂ ಅವರು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದಾರೆ ಎಂದು ಕಮಲವ್ವಾ ಆರೋಪಿಸಿದ್ದಾರೆ. ಇದಕ್ಕೆ ಗ್ರಾಮಸ್ಥರೊಬ್ಬರು ಪ್ರತಿಕ್ರಿಯಿಸಿ, ಜೆಸಿಬಿಯಿಂದ ಕೇವಲ ಐದು ತಾಸು ಕೆಲಸ ಮಾಡಿ ಹೋಗಿದ್ದಾರೆ. ಹೀಗಾಗಿ ನಾವೇ ಸೇರಿ ಸೇತುವೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ವೃದ್ಧ ಮಹಿಳೆ ಅವರ ಬಳಿ ಏನೇ ಸಮಸ್ಯೆ ಕೇಳಿದಾಗ ದುಡ್ಡು ಮಾತ್ರ ತಗೊಂಡು ವೋಟ್ ಹಾಕಿಲ್ಲ ಎಂದು ಹೇಳುತ್ತಾರೆ. ನಾವು ಏನೇ ಕೇಳಲು ಹೋದರೂ ಹುಚ್ಚು ನಾಯಿ ಓಡಿಸಿದಂತೆ ಓಡಿಸುತ್ತಾರೆ. ಬಡವರಿಗೆ ಏನೋ ಕಿಮ್ಮತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯ ಪ್ರವೇಶಿಸಿ, ಆ ನಾಯಿಗಳನ್ನು ಓಡಿಸಬೇಕಲ್ಲ, ಅವುಗಳನ್ನು ಓಡಿಸಿದರೆ ನಾವು ಗಟ್ಟಿ ಆಗುತ್ತೇವೆ ಎಂದಾಗ ಕಮಲವ್ವಾ ಪ್ರತಿಕ್ರಿಯಿಸಿ, ನಾವು ಗಟ್ಟಿ ಇದ್ದೇವೆ ನಾಯಿಗಳನ್ನು ಓಡಿಸುತ್ತೇವೆ. ಅದಕ್ಕೆ ನಾವು ಗಟ್ಟಿ ಅದೀವಿ. ನೀವು ಏನೂ ವಿಚಾರ ಮಾಡಬೇಡಿ ಎಂದು ಹೇಳಿದ್ದಾರೆ.

CKD BGK FLOOD

ಇಪ್ಪತ್ತು ವರ್ಷದಿಂದ ಗ್ರಾಮಕ್ಕೆ ರಸ್ತೆ, ಸೇತುವೆ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಅರ್ಧಂಬರ್ಧ ಕೆಲಸ ಮಾಡಿ ಅದರ ಹೆಸರ ಮೇಲೆ ಸಾಕಷ್ಟು ಹಣ ಪಡೆದುಕೊಂಡಿದ್ದಾರೆ. ಕೆಲಸ ಅರ್ಧ ಆಗಿದ್ದಕ್ಕೆ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಗ್ರಾಮಸ್ಥರೆಲ್ಲರೂ ಸೇರಿ ಹಣ ಹಾಕಿ ರಸ್ತೆ ಮಾಡಿಕೊಂಡಿದ್ದೇವೆ ಮಹಿಳೆ ಆರೋಪಿಸಿದ್ದಾರೆ.

ಏನಾದರೂ ಕೇಳಿದರೆ ನೀವು ಹಾಗೆ ಮತ ಹಾಕಿಲ್ಲ ದುಡ್ಡು ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಬಡವರಿಗೆ ಮನೆ ಕಟ್ಟಿಕೊಡಲು ಇಪ್ಪತ್ತೈದು ಸಾವಿರ ಲಂಚ ಪಡೆಯುತ್ತಾರೆ. ನಾನು ಆಸ್ಪತ್ರೆಯಲ್ಲಿದ್ದರೂ ನನ್ನ ಬಳಿ ಬಂದು ಶಾಸಕರ ಬೆಂಬಲಿಗರು ಹಣ ಕೇಳಿದ್ದರು. ಆಸ್ಪತ್ರೆಯಲ್ಲೇ ಅವರಿಗೆ ದಬಾಯಿಸಿ ಕಳುಹಿಸಿದ್ದೆ. ನಾನು ಇಂದಿಗೂ ತಾಡಪಲ್ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ನೀನೇ ಲೀಡ್ ತೆಗೆದುಕೊಂಡು ಗಟ್ಟಿಯಾಗಿ ನಿಲ್ಲು. ನಿಮ್ಮ ಜೊತೆಗೆ ನಾನಿರುತ್ತೇನೆ. ನಿಮಗೆ ಏನು ಬೇಕು ನಾನು ಮಾಡಿಕೊಡುತ್ತೇನೆ ಎಂದು ಮಹಿಳೆ ಕಮಲವ್ವಗೆ ಅಭಯ ನೀಡಿದ್ದಾರೆ.

bgk flood rain

ಹರಿಯುವ ಹಳ್ಳದ ನೀರಿನಲ್ಲೇ ನಿಂತು ಮಹಿಳೆ ಅಳಲು ತೊಡಿಕೊಂಡಿದ್ದು, ಹಳ್ಳದ ದಂಡೆಯಲ್ಲಿನ ಕಲ್ಲಿನ ಮೇಲೆ ಕುಳಿತು ಸತೀಶ್ ಜಾರಕಿಹೊಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಾರೆ. ಕಮಲವ್ವ ಅಳಲು ತೊಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

TAGGED:BelgaumPublic TVramesh jarkiholiSatish jarkiholiwomanಪಬ್ಲಿಕ್ ಟಿವಿಬೆಳಗಾವಿಮಹಿಳೆರಮೇಶ್ ಜಾರಕಿಹೊಳಿಸತೀಶ್ ಜಾರಕಿಹೊಳಿ
Share This Article
Facebook Whatsapp Whatsapp Telegram

Cinema news

Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories
Anantha Padmanabha
ಹಿಟ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
Cinema Latest Sandalwood
rashmika vijay devarakonda geetha govindam
ರಶ್ಮಿಕಾ, ವಿಜಯ್‌ ಮದುವೆಗೆ ಬೆಂಗಳೂರಿನಿಂದ ಹೂ ಪೂರೈಕೆ
Bengaluru City Cinema Latest Main Post Sandalwood South cinema Top Stories

You Might Also Like

Andhra Kurnool HIV
Crime

ಮದುವೆಯಾಗದಿದ್ದಕ್ಕೆ ಪ್ರಿಯಕರನ ಪತ್ನಿಗೆ HIV ಸೋಂಕು ಇಂಜೆಕ್ಟ್ ಮಾಡಿದ ಕಿರಾತಕಿ ಲವ್ವರ್‌

Public TV
By Public TV
8 minutes ago
People heading towards Bengaluru 4 km traffic jam on Nelamangala Kunigal Road
Bengaluru Rural

ಬೆಂಗಳೂರಿನತ್ತ ಜನ| ನೆಲಮಂಗಲ – ಕುಣಿಗಲ್‌ ರಸ್ತೆಯಲ್ಲಿ 4 ಕಿ.ಮೀ ಟ್ರಾಫಿಕ್‌ ಜಾಮ್‌

Public TV
By Public TV
15 minutes ago
donald trump jd vance
Latest

ಭಾರತದ ವ್ಯಾಪಾರ ಒಪ್ಪಂದಕ್ಕೆ ಶ್ವೇತಭವನದ ಜೊತೆ ಹೋರಾಟ- ಟ್ರಂಪ್, ವ್ಯಾನ್ಸ್‌ನಿಂದ ಸಾಧ್ಯವಾಗುತ್ತಿಲ್ಲ: ಸ್ಫೋಟಕ ಆಡಿಯೋ ಔಟ್‌

Public TV
By Public TV
47 minutes ago
Rajeev Gowda 1
Bengaluru City

ಪರಾರಿಯಾಗಿದ್ದ ಧಮ್ಕಿ ಪುಢಾರಿ ರಾಜೀವ್‌ ಗೌಡ ಕೊನೆಗೂ ಅರೆಸ್ಟ್‌

Public TV
By Public TV
1 hour ago
Zameer Ahmed
Davanagere

ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣ್ತಾರೆ: ಹೆಚ್‌ಡಿಕೆಗೆ ಜಮೀರ್ ಟಾಂಗ್‌

Public TV
By Public TV
1 hour ago
NAVAMI 1
Chikkamagaluru

ಚಿಕ್ಕಮಗಳೂರು | ಹಿಟ್ & ರನ್‍ಗೆ ಸಹಕಾರ ಸಂಘದ ಸಿಬ್ಬಂದಿ ಬಲಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?