ಗಣೇಶ ಹಬ್ಬ ಆಚರಣೆಗೆ ಮಹಾರಾಷ್ಟ್ರಕ್ಕೆ ಸಿಎಂ, ಡಿಸಿಎಂಗಳು

Public TV
1 Min Read
CM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಗಳವಾರ ಮಹಾರಾಷ್ಟ್ರಕ್ಕೆ ಭೇಟಿ ಕೊಡಲಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಆಹ್ವಾನದ ಮೇರೆಗೆ ತೆರಳುತ್ತಿರುವ ಸಿಎಂ ಯಡಿಯೂರಪ್ಪ ಅವರಿಗೆ ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಸಾಥ್ ನೀಡಲಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನಿವಾಸಕ್ಕೆ ಭೇಟಿ ನೀಡಿ, ಗಣೇಶ ಪೂಜೆಯಲ್ಲಿ ದೇವೇಂದ್ರ ಫಡ್ನವೀಸ್ ಜೊತೆ ಭಾಗಿಯಾಗಲಿದ್ದಾರೆ.

CM Devendra Fadnavis e1567418255415

ನಾಳೆ ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಅದ್ಧೂರಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಯಡಿಯೂರಪ್ಪರನ್ನು ದೇವೇಂದ್ರ ಫಡ್ನವೀಸ್ ಆಹ್ವಾನಿಸಿದ್ದಾರೆ. ಭೇಟಿ ವೇಳೆ ಮಹದಾಯಿ ವಿಚಾರ, ಪ್ರವಾಹ ಪರಿಸ್ಥಿತಿ ಹಾಗೂ ಇತರ ರಾಜಕೀಯ ವಿಚಾರಗಳನ್ನು ಸಿಎಂ ಚರ್ಚಿಸಲಿದ್ದಾರೆ.

ಕೊಯ್ನಾ ಜಲಾಶಯದಿಂದ ದಿಢೀರ್ ಕೃಷ್ಣಾ ನದಿಗೆ ನೀರು ಹರಿಸಿದ ವಿಚಾರವನ್ನು ಕೂಡ ಸಿಎಂ ಪ್ರಸ್ತಾಪಿಸಲಿದ್ದಾರೆ. ಮುಂದಿನ ಸಲ ಕೋಯ್ನಾದಿಂದ ನೀರು ಹರಿಸುವ ಮುನ್ನ ಮುನ್ಸೂಚನೆ ಕೊಡುವ ಬಗ್ಗೆಯೂ ಮನವಿ ಮಾಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Mahadayi River 4

Share This Article
Leave a Comment

Leave a Reply

Your email address will not be published. Required fields are marked *