Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

Public TV
Last updated: July 31, 2019 10:58 pm
Public TV
Share
1 Min Read
Bhaanu weds Bhoomi A
SHARE

ಬೆಂಗಳೂರು: ಜೆಕೆ ಆದಿ ನಿರ್ದೇಶನದ ಚೊಚ್ಚಲ ಚಿತ್ರ ಭಾನು ವೆಡ್ಸ್ ಭೂಮಿ. ಪೂರ್ವಿ ಕ್ರಿಯೇಷನ್ಸ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಸದ್ದು ಮಾಡುತ್ತಿರೋದೇ ಹಾಡುಗಳ ಮೂಲಕ. ಎಲ್ಲ ಹಾಡುಗಳೂ ಕೂಡಾ ಕಥೆಯ ನವಿರುತನವನ್ನೇ ಹೊದ್ದುಕೊಂಡಂತೆ ಮೂಡಿ ಬಂದ ಕೇಳುಗರಿಗೆಲ್ಲ ಖುಷಿ ನೀಡಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದ ಜೊತೆಗೇ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Bhaanu weds Bhoomi SURYA PRABH and RAKSHATHA MALNAD 8

ಭಾನು ವೆಡ್ಸ್ ಭೂಮಿ ಎಂಬ ಹೆಸರೇ ಮುದ್ದಾದೊಂದು ಲವ್ ಸ್ಟೋರಿಯ ಘಮವನ್ನಿಟ್ಟಿಕೊಂಡಿದೆ. ಇದರಲ್ಲಿ ವಿಶೇಷವಾದ ಒಂದು ಹಾಡನ್ನು ರಂಗಾಯಣ ರಘು ಹಾಡಿದ್ದಾರೆ. ಅಂದಹಾಗೆ ನಟನೆ ಬಿಟ್ಟು ಬೇರೆ ಯಾವುದರತ್ತಲೂ ಗಮನ ಹರಿಸದ ರಘು ಹಾಡಲು ಮನಸು ಮಾಡಿದ್ದು ತಮ್ಮ ಗೆಳೆಯನಿಗೋಸ್ಕರ. ಈ ಚಿತ್ರದಲ್ಲಿ ಶೋಭರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೇ ಖುದ್ದಾಗಿ ಒತ್ತಾಯ ಮಾಡಿದ ಪರಿಣಾಮವಾಗಿಯೇ ರಂಗಾಯಣ ರಘು ಹಾಡಿದ್ದಾರೆ. ಆ ಹಾಡೂ ಕೂಡಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.

Bhaanu weds Bhoomi SURYA PRABH and RAKSHATHA MALNAD 10

ರಂಗಾಯಣ ಹಾಡಿರೋ ಈ ಹಾಡಿಗೆ ಶೋಭರಾಜ್ ನೃತ್ಯ ಮಾಡಿರೋದು ಮತ್ತೊಂದು ವಿಶೇಷ. ಹೀಗೆ ನಿರ್ದೇಶಕ ಜೆಕೆ ಆದಿ ಭಾನು ವೆಡ್ಸ್ ಭೂಮಿಯನ್ನು ಪ್ರತಿಯೊಂದರಲ್ಲಿಯೂ ವಿಶೇಷತೆಗಳನ್ನು ಪೋಣಿಸಿಯೇ ನಿರ್ದೇಶನ ಮಾಡಿದ್ದಾರೆ. ಈವರೆಗೂ ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿರೋ ಆದಿ ಅವರ ಮೊದಲ ಕನಸಿನಂಥಾ ಚಿತ್ರವಿದು. ಈ ಮೂಲಕವೇ ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಡುಗಳ ಕ್ವಾಲಿಟಿಯೇ ಈ ಸಿನಿಮಾಕ್ಕಾಗಿ ಜನ ಕಾತರದಿಂದ ಕಾಯುವಂತೆ ಮಾಡಿದೆ.

TAGGED:Bhanu Weds BhoomiJ.K AadhiKannada moviePublic TVRangayana RaghuRishitha MalnadSurya Prabhಕಿಶೋರ್ ಶೆಟ್ಟಿಜೆಕೆ ಆದಿಪಬ್ಲಿಕ್ ಟಿವಿಭಾನು ವೆಡ್ಸ್ ಭೂಮಿರಂಗಾಯಣ ರಘು
Share This Article
Facebook Whatsapp Whatsapp Telegram

You Might Also Like

Siddaramaiah 4
Districts

ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ

Public TV
By Public TV
13 minutes ago
Cricket

`ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

Public TV
By Public TV
14 minutes ago
Cricket

ಚೋಕರ್ಸ್‌ ಹಣೆಪಟ್ಟಿ ಕಳಚಿದ ಹರಿಣರು – ದ. ಆಫ್ರಿಕಾಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟ, ದಶಕಗಳ ಕನಸು ನನಸು

Public TV
By Public TV
15 minutes ago
Samir Kumar Sinha plane crash
Latest

ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

Public TV
By Public TV
56 minutes ago
Crime

ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್‍ಐಎ ತಂಡ

Public TV
By Public TV
1 hour ago
Latest

NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?