ಪರ ಪುರುಷನ ಜೊತೆ ಪತ್ನಿ ಎಸ್ಕೇಪ್- ಪತಿ ಆತ್ಮಹತ್ಯೆಗೆ ಶರಣು

Public TV
2 Min Read
nml suicide 1

ಬೆಂಗಳೂರು: ಪರ ಪುರುಷನ ಜೊತೆ ಪತ್ನಿ ಎಸ್ಕೇಪ್ ಆಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲ ಸಮೀಪದ ಸೊಲೂರು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಂತರಾಜು (40) ಆತ್ಮಹತ್ಯೆಗೆ ಶರಣಾದ ಪತಿ. ಭಾಗ್ಯ ಪರ ಪುರುಷನ ಜೊತೆ ಎಸ್ಕೇಪ್ ಆಗಿದ್ದಳು. ಕಾಂತರಾಜು, 10 ವರ್ಷದ ಹಿಂದೆ ಭಾಗ್ಯಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದನು. ಕಾಂತರಾಜು ಹಾಗೂ ಭಾಗ್ಯ ದಂಪತಿಗೆ 9 ವರ್ಷದ ಗಂಡು ಮಗ ಕೂಡ ಇದೆ.

nml suicide 2

ಭಾಗ್ಯಗೆ ಮಗು ಇದ್ದರೂ, ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತ್ನಿಯ ವರ್ತನೆಯ ಬಗ್ಗೆ ಪತಿ ಕಾಂತರಾಜು ಹಾಗೂ ಕುಟುಂಬಸ್ಥರು ಸಾಕಷ್ಟು ಬಾರಿ ವಾರ್ನ್ ಮಾಡಿದ್ದರು. ಆದರೆ ಭಾಗ್ಯ ತನ್ನ ಪತಿ ಹಾಗೂ ಕುಟುಂಬಸ್ಥರ ಮಾತನ್ನು ಕೇಳಲಿಲ್ಲ. ಭಾಗ್ಯಳ ವರ್ತನೆಯಿಂದ ಮನನೊಂದ ಕಾಂತರಾಜು, ತನ್ನ ಕಷ್ಟದ ಬಗ್ಗೆ ಲೈವ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಲ್ಲದೆ ತನ್ನದೇ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

kudur police station

ವಿಡಿಯೋದಲ್ಲಿ ಹೇಳಿದ್ದೇನು?:
ನನ್ನ ಜೀವನದಲ್ಲಿ ನಾಲ್ಕು ಜನ ಮೋಸ ಮಾಡಿದ್ದಾರೆ. ಮೊದಲು ನನ್ನ ಪತ್ನಿ, ಕುಮಾರ್, ಮತ್ತೆ ಅವರ ಅಕ್ಕ ಸುಶೀಲ ಹಾಗೂ ಭಾವ ಮಂಜ ನನಗೆ ಮೋಸ ಮಾಡಿದ್ದಾರೆ. ಕುಮಾರ್ ಫೇಸ್‍ಬುಕ್‍ನಲ್ಲಿ ನನ್ನ ಪತ್ನಿಯ ನಂಬರ್ ತೆಗೆದುಕೊಂಡು ನನ್ನ ಪತ್ನಿಗೆ ಫೋನ್ ಮಾಡುತ್ತಿದ್ದನು. ನಂತರ ನಾಲ್ವರು ಸೇರಿ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಆಗ ನಾನು ಪೊಲೀಸ್ ಠಾಣೆಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದೆ. ಬಳಿಕ ಪೊಲೀಸರು ನನ್ನ ಪತ್ನಿಯನ್ನು ಹುಡುಕಿಕೊಟ್ಟರು ಎಂದು ಹೇಳಿದ್ದಾನೆ.

love 1

ಪೊಲೀಸರು ಭಾಗ್ಯಳನ್ನು ಹುಡುಕಿಕೊಟ್ಟ ಬಳಿಕ ಒಂದೂವರೆ ತಿಂಗಳು ನನ್ನ ಜೊತೆ ಇದ್ದಳು. ಶನಿವಾರ ಭಾಗ್ಯ ಕುರಿ ಮೇಯಿಸುವಾಗ ಮತ್ತೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ನನ್ನ ಸಾವಿಗೆ ಈ ನಾಲ್ವರು ಕಾರಣ. ಇಂದು ನನ್ನ ಸಾವಿನ ದಿನ ಆಗಿರಬಹುದು. ಮುಂದೆ ಅವರ ಸಾವಿನ ದಿನ ಆಗಿರುತ್ತದೆ ಎಂದು ಕಾಂತರಾಜು ವಿಡಿಯೋದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಸದ್ಯ ಘಟನೆ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪತ್ನಿ ಭಾಗ್ಯ ಹಾಗೂ ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *