ಕೂಲಿ ಕೆಲ್ಸ ಮಾಡ್ತಿದ್ದ ಪೋಷಕರು – ಸಂಪ್‍ನಲ್ಲಿ ಮುಳುಗಿ ಮಕ್ಕಳಿಬ್ಬರು ದುರ್ಮರಣ

Public TV
1 Min Read
BUILDEIN

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಂಪ್‍ನಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

ನವೀನ್(5) ಮತ್ತು ಬಸಮ್ಮ(1) ಮೃತ ಮಕ್ಕಳು. ಯಾದಗಿರಿ ಮೂಲದ ಮಲ್ಲಪ್ಪ ಹಾಗೂ ಕಾಶಮ್ಮ ದಂಪತಿ ಮಕ್ಕಳು.

vlcsnap 2019 03 29 07h13m30s141

ದಂಪತಿ ಕೊಡಗಿಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಕಟ್ಟಡದಲ್ಲಿ ಆಟವಾಡಿಕೊಂಡಿದ್ದ ಮಕ್ಕಳು ಸಂಪ್‍ನಲ್ಲಿ ಬಿದ್ದಿದ್ದಾರೆ. ಮಕ್ಕಳ ಚೀರಾಟದ ಸದ್ದು ಕೇಳಿ ಕೂಡಲೇ ಇವರನ್ನು ರಕ್ಷಿಸಿ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿ ರಂಗಪ್ಪ ತಿಳಿಸಿದ್ದಾರೆ.

ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *