[Ruby_E_Template id="1354606"]
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

Public TV
Last updated: February 24, 2019 7:59 am
Public TV
2 Min Read

-ಸ್ಥಳದಲ್ಲೇ ಕೌಂಟರ್ ತೆಗೆದ ವಿಮೆ ಕಂಪನಿಗಳು

ಬೆಂಗಳೂರು: ಬೆಂಗಳೂರಿನ ಯಲಹಂಕದ ಬಳಿಯ ಏರ್ ಶೋನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ. ಇದೀಗ ವಾಹನ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಸಾಲ ಸೋಲ ಮಾಡಿ, ಇಎಂಐಗಳನ್ನ ಕಟ್ಟಿಕೊಂಡು ಬರ್ತಿದ್ದವರು ಅಯ್ಯೋ… ಹೀಗಾಗೋಯ್ತಲ್ಲ ಅಂತ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

ಏರ್ ಶೋನಲ್ಲಿ ಧಗಧಗಿಸಿ ಹೋದ ಕಾರ್ ಗಳು ಮಾಲೀಕರು ಇದೀಗ ಇನ್ಸುರೆನ್ಸ್ ಪಡೆಯೋಕೆ ಪರದಾಡುತ್ತಿದ್ದಾರೆ. ಆದ್ರೆ, ನ್ಯಾಚುರಲ್ ಡಿಸಾಸ್ಟರ್ ಅಂತ ಈ ಘಟನೆಯನ್ನು ಘೋಷಣೆ ಮಾಡಿದ್ರೆ ಬಹುತೇಕ ಎಲ್ಲಾ ವಾಹನಗಳಿಗೆ ಹಂಡ್ರೆಡ್ ಪರ್ಸೆಂಟ್ ವಿಮೆ ಸಿಗಲಿದೆ. ಹೀಗಾಗಿ, ವಿಮಾ ಕಂಪನಿಗಳು ಸಹ ಘಟನಾ ಸ್ಥಳದಲ್ಲೇ ಕೌಂಟರ್ ತೆಗೆದಿವೆ. ಸುಟ್ಟು ಹೋಗಿರುವ ಕಾರ್‍ಗಳನ್ನು ಪತ್ತೆ ಹಚ್ಚಿದ ಮಾಲೀಕರು ರಿಜಿಸ್ಟ್ರೇಷನ್ ನಂಬರ್ ಬರೆದಿದ್ದಾರೆ.

ಇವತ್ತೂ ಸಹ ಯಲಹಂಕ ಆರ್ ಟಿಒ ಕಚೇರಿ ಓಪನ್ ಇರುತ್ತೆ. ವಾಹನ ನೊಂದಣಿ, ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಸಾರಿಗೆ ಇಲಾಖೆ ಯಲಹಂಕದಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ. ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, ಮೊ. 9449864050 ಕಾರು ಮಾಲೀಕರು ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಇನ್ಸುರೆನ್ಸ್ ಗಾಗಿ ಏನೇನು ಮಾಡಬೇಕು..?
* ವಾಹನ ಮಾಲೀಕರು ಮೊದಲು ಕಂಪ್ಲೆಂಟ್ ಕೊಡಬೇಕು.
* ಆ ಕಂಪ್ಲೆಂಟ್ ಕಾಪಿಯನ್ನು ಇಟ್ಕೊಂಡು ವಿಮೆಗೆ ಅಪ್ಲೈ ಮಾಡಬೇಕು.
* ಇನ್ಶುರೆನ್ಸ್ ಕಚೇರಿಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
* ಮೂಲ ದಾಖಲಾತಿ ಇಲ್ಲದಿದ್ದರೆ ನಕಲು ಪ್ರತಿಗಳನ್ನು ಸಲ್ಲಿಸಿ ಇನ್ಸುರೆನ್ಸ್ ಗೆ ಅರ್ಜಿ ಸಲ್ಲಿಸಿ.
* ಮೂಲ ದಾಖಲಾತಿ ಕಳೆದುಹೋಗಿದ್ದರೆ ಆರ್ ಟಿಒ ಕಚೇರಿಗೆ ಭೇಟಿ ನೀಡಿ ನಕಲು ದಾಖಲಾತಿಗಳನ್ನು ಪಡೆದುಕೊಳ್ಳಿ.

* ನಂತರ ಎಲ್ಲಾ ದಾಖಲಾತಿ ಸಮೇತ ಕಂಪ್ಲೆಂಟ್ ಕಾಪಿಯನ್ನು ಇನ್ಸುರೆನ್ಸ್ ಆಫೀಸ್ ಗೆ ಸಲ್ಲಿಸಿ.
* ಆಗ ಇನ್ಸುರೆನ್ಸ್ ಕಂಪನಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತದೆ.
* ಒಂದು ವೇಳೆ ಹೊರ ರಾಜ್ಯದಲ್ಲಿ ನೋಂದಣಿಯಾಗಿದ್ದರೆ ಎಲ್ಲಿ ನೋಂದಣಿಯಾಗಿದೆ, ಕೊನೆಗೆ ಯಾರು ರಿಜಿಸ್ಟ್ರರ್ ಮಾಡಿದ್ರು ಅನ್ನೋ ದಾಖಲೆಯೊಂದಿಗೆ ಕಂಪ್ಲೆಂಟ್ ಕಾಪಿ ಸಮೇತ ವಿಮೆಗೆ ಅರ್ಜಿ ಸಲ್ಲಿಸಿ.
* ಮೊದಲನೆಯದಾಗಿ ನಿಮ್ಮ ಇನ್ಸುರೆನ್ಸ್ ಕೊನೆಯಾಗಿರಬಾರದು. ಮಾನ್ಯವಾಗಿರಬೇಕು.
* ಇನ್ಸುರೆನ್ಸ್ ನವೀಕರಣ ಆಗಿರಬೇಕು
* ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಆರ್ ಟಿಒ ಕಚೇರಿಯಿಂದ ಒಂದೇ ಬಾರಿಗೆ ಅಪ್ರೂವಲ್ ಮಾಡೋ ಕ್ರಮದ ಭರವಸೆ.

ಏರ್‍ಶೋ ಎಂದಿನ ವೇಳಾಪಟ್ಟಿಯಂತೆ ಇವತ್ತೂ ಮುಂದುವರಿಯಲಿದೆ. ಊಹಾಪೋಹಗಳಿಗೆ ಕಿವಿಕೊಡಬೇಡಿ ಅಂತಾ ಡಿಫೆನ್ಸ್ ಅಧಿಕಾರಿಗಳು ಹೇಳಿದ್ದಾರೆ. ದುರಂತರದ ಬಳಿಕ ಆಯೋಜಕರು ಎಚ್ಚೆತ್ತುಕೊಂಡಿದ್ದು, ಕಾರ್ ಪಾರ್ಕಿಂಗ್‍ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೀಕೆಂಡ್ ಆಗಿರೋ ಕಾರಣ ಸಾವಿರಾರು ಮಂದಿ ಆಗಮಿಸಬಹುದು. ಆದರೆ ಘಟನೆಯಿಂದ ವೀಕ್ಷಕರ ಸಂಖ್ಯೆ ಕಡಿಮೆಯೂ ಆಗಬಹುದು. ಯಾವುದೇ ಕಾರಣಕ್ಕೂ ಏರ್ ಶೋ ರದ್ದಾಗಲ್ಲ. ಎಂದಿನಂತೆ ನಡೆಯಲಿದೆ.

https://www.youtube.com/watch?v=ISKqdrigZd0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:Aero India 2019Air ShowbengalurucarinsurancePublic TVYelahankaಇನ್ಸುರೆನ್ಸ್ಏರೋ ಇಂಡಿಯಾ 2019ಏರ್ ಶೋಕಾರ್ಪಬ್ಲಿಕ್ ಟಿವಿಬೆಂಗಳೂರುಯಲಹಂಕವಿಮೆ

You Might Also Like

Bollywood

ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

Public TV
By Public TV
7 hours ago
Bengaluru City

ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್‌ – ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

Public TV
By Public TV
8 hours ago
Crime

ವಾಕಿಂಗ್ ವೇಳೆ ಕಾರು ಡಿಕ್ಕಿ – ಮ್ಯಾರಥಾನ್ ಓಟಗಾರ ಶತಾಯುಷಿ ಫೌಜಾ ಸಿಂಗ್ ಸಾವು

Public TV
By Public TV
8 hours ago
Bengaluru City

ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

Public TV
By Public TV
8 hours ago
Big Bulletin

ಬಿಗ್‌ ಬುಲೆಟಿನ್‌ 15 July 2025 ಭಾಗ-1

Public TV
By Public TV
8 hours ago
Big Bulletin

ಬಿಗ್‌ ಬುಲೆಟಿನ್‌ 15 July 2025 ಭಾಗ-2

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account