ಸಂತೆ ನೋಡಲು ಬಂದ ದಾರಿಹೋಕ ‘ಕಳೆದೇ ಹೋದ’- ಭಾವನಾ ಲೋಕಕ್ಕೆ ಕರೆದೊಯ್ಯುತ್ತೆ ಚಂಬಲ್ ಹಾಡು

Public TV
1 Min Read
Chambal New Song

– ಬದುಕನ್ನ ಅರಿಸುತ್ತ ಬಂದವ ತನ್ನಲ್ಲಿಯೇ ಕಳೆದು ಹೋದ

ಬೆಂಗಳೂರು: ಚಂಬಲ್ ನಟ ನೀನಾಸಂ ಸತೀಶ್ ಚಂದನವನದ ಬಹುನಿರೀಕ್ಷಿತ ಚಿತ್ರ. ಇಂದು ಚಂಬಲ್ ಸಿನಿಮಾದ ಕಳೆದೇ ಹೋದೆ ನಾನು’ ಲಿರಿಕಲ್ ಹಾಡು ಸಂಜೆ ಬಿಡುಗಡೆಯಾಗಿದ್ದು, ಭಾವನಾ ಜೀವಿಗಳನ್ನು ಮಾಯಾ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ.

‘ಕಳೆದೇ ಹೋದೇ ನಾನು’ ಹಾಡಿನ ಸಾಹಿತ್ಯದ ಪ್ರತಿ ಸಾಲು ವಿಶೇಷ ಅರ್ಥವನ್ನು ಒಳಗೊಂಡಿದೆ. ದಕ್ಷ ಅಧಿಕಾರಿಯಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದು, ಪ್ರಾಮಾಣಿಕತೆಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತದೆ. ತನಗೆ ಎದುರಾದ ತೊಂದರೆಗಳನ್ನು ನಾಯಕ ನಟ ಹೇಗೆ ಎದುರಿಸುತ್ತಾನೆ ಎನ್ನುವುದು ಚಿತ್ರ ಬಿಡುಗಡೆಯಾದಾಗ ಉತ್ತರ ಸಿಗುತ್ತದೆ. ಈ ವೇಳೆ ನಾಯಕನ ಮನಸ್ಥಿತಿ ಹೇಗಿರುತ್ತೆ ಎಂಬುದನ್ನು ಪದಪುಂಜಗಳಲ್ಲಿ ಹೇಳುವಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಯಶಸ್ವಿಯಾಗಿದ್ದಾರೆ. ತಮ್ಮ ಹಾಡುಗಳ ಮೂಲಕ ಭಾವನಾರಹಿತ ಜೀವಿಯನ್ನು ಭಾವನಾ ಲೋಕಕ್ಕೆ ಕರೆದೊಯ್ಯುವಲ್ಲಿ ಕಾಯ್ಕಿಣಿ ಅವರ ಲೇಖನಿ ಏಣಿಯಾಗಿ ಬದಲಾಗಿದೆ.

jayanth udith a

ಜಯಂತ್ ಕಾಯ್ಕಿಣಿ ಅವರ ಪದಪುಂಜಗಳಿಗೆ ಪೂರ್ಣಚಂದ್ರ ತೇಜಸ್ವಿ ಅವರ ಕೋಮಲ ಸಂಗೀತದಲ್ಲಿ ಉದಿತ್ ಹರಿತಾಸ್ ತಮ್ಮ ಕಂಠದ ಮೂಲಕ ಜೀವವನ್ನು ನೀಡಿದ್ದಾರೆ. ನೀನಾಸಂ ಸತೀಶ್ ಗೆ ಜೊತೆಯಾಗಿ ಸೋನುಗೌಡ ಕಾಣಿಸಿಕೊಂಡಿದ್ದು, ಸಾಮಾಜಿಕ ಕಥೆಯೊಂದನ್ನು ನಿರ್ದೇಶಕರು ಥ್ರಿಲ್ಲರ್ ವಿಧಾನದಲ್ಲಿ ಹೇಳಲು ಹೊರಟಿರುವ ಸುಳಿವು ಸಿಕ್ಕಿದೆ.

ನೈಜ ಘಟನೆಯ ಆಧಾರಿತ ಸಿನಿಮಾ ಎಂದು ಚಿತ್ರದ ಟ್ರೇಲರ್ ಹೇಳಿತ್ತು. ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೀನಾಸಂ ಸತೀಶ್ ತಾನು ಕೇವಲ ಹಾಸ್ಯ ಪಾತ್ರಗಳಿಗೆ ಸೀಮಿತ ಅಲ್ಲ ಎಂಬುದನ್ನು ಚಂಬಲ್ ಟ್ರೇಲರ್ ಮೂಲಕ ಹೇಳಿದ್ದಾರೆ. ವಿಭಿನ್ನ ಅನ್ನೋದಕ್ಕಿಂತ ಸಿನಿಮಾ ಯಾರ ಜೀವನಾಧರಿತ ಕಥೆ ಎಂಬುದನ್ನು ಚಿತ್ರ ಸ್ಪಷ್ಟಪಡಿಸಿಲ್ಲ. ಕೇವಲ ಓರ್ವ ಐಎಎಸ್ ಅಧಿಕಾರಿಯ ಜೀವನದ ಎಳೆಯ ಮೇಲೆ ಸಿನಿಮಾ ಮಾಡಲಾಗಿದೆ ಎಂಬುದನ್ನ ಹೇಳಿಕೊಂಡಿದೆ. ಇನ್ನು ಟ್ರೇಲರ್ ನೋಡಿದ ಜನರು ಮಾತ್ರ ಇದು ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಕಥೆ ಅಂತಾನೇ ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *