ತುಮಕೂರು: ಅನ್ಯಕೋಮಿನ ಹುಡುಗನೊಬ್ಬ ಹಿಂದೂ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಲು ಯತ್ನಿಸಿ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಖಾಸಗಿ ಹೋಟೆಲ್ ಬಳಿ ನಡೆದಿದೆ.
ತುಮಕೂರು ನಗರದ ಇಮ್ರಾನ್, ರಮೇಶ್ ಎಂಬ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡು ವಿಕಲಚೇತನ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದಾನೆ. ಹೀಗೆ ಇಬ್ಬರೂ ನಾಲ್ಕು ವರ್ಷಗಳ ಪರಸ್ಪರ ಪ್ರೀತಿಸಿದ್ದಾರೆ. ಕೆಲ ತಿಂಗಳ ಹಿಂದೆ ಯುವತಿ ಯುವಕನ ಮನೆಗೆ ಹೋದಾಗ ಆತ ಅನ್ಯಕೋಮಿಗೆ ಸೇರಿದವನು ಎಂದು ತಿಳಿದು ಮದುವೆಗೆ ನಿರಾಕರಿಸಿದ್ದಾಳೆ.
ಯುವತಿ ಮನೆಯಲ್ಲೂ ಮದುವೆ ತೀವ್ರ ವಿರೋಧವ್ಯಕ್ತವಾಗಿದೆ. ಹಾಗಾಗಿ ಯುವಕ ಇಮ್ರಾನ್ ಮದುವೆಯಾಗದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ನಡುವೆ ಯುವತಿ ನಗರದ ಹೋಟೆಲ್ ನಲ್ಲಿ ಊಟಕ್ಕೆ ಬಂದಾಗ ಯುವಕ ಇಮ್ರಾನ್ ಹಾಗೂ ಆತನ ಸ್ನೇಹಿತೆ ಇಬ್ಬರೂ ಸೇರಿ ನಡುರಸ್ತೆಯಲ್ಲಿಯೇ ಯುವತಿಯನ್ನು ಥಳಿಸಿದ್ದಾರೆ.
ಇವರ ಗಲಾಟೆ ನೋಡಿ ಸುತ್ತುವರಿದ ಜನರು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.