Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಗೌರಿ ಲಂಕೇಶ್ ಹತ್ಯೆ ಪ್ರಕರಣ-ಹಂತಕರ ಇಂಚಿಂಚು ಮಾಹಿತಿ ಬಹಿರಂಗ

Public TV
Last updated: June 2, 2018 7:52 am
Public TV
Share
3 Min Read
Gauri Lankesh
SHARE

ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಅವರ ಹಿಂದೂ ಧರ್ಮ ವಿರೋಧಿ ನಿಲುವೇ ಕಾರಣ ಅಂತ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಿದೆ. ಕೋರ್ಟ್ ಗೆ ಸಲ್ಲಿಸಿರೋ 651 ಪುಟಗಳ ಜಾರ್ಜ್ ಶೀಟ್ ಪಬ್ಲಿಕ್ ಟಿವಿಗೆ ಸಿಕ್ಕಿದ್ದು, ಹತ್ಯೆಗೆ ನಡೆಸಲಾದ ಸಂಚು, ಪ್ರಮುಖ ಆರೋಪಿ ನವೀನ್ ಅಲಿಯಾಸ್ ಹೊಟ್ಟೆಮಂಜನ ಪತ್ನಿ ನೀಡಿರೋ ಹೇಳಿಕೆಯನ್ನು ದಾಖಲಿಸಲಾಗಿದೆ.

ಸದ್ಯ ಕೈಗೆ ಸಿಗದಿರೋ ಆರೋಪಿಗಳನ್ನು ಹಿಡಿಯೋ ಸಲುವಾಗಿ ನವೀನ್ ಮತ್ತು ಬಂಧನದಲ್ಲಿರೋ ಆತನ ಮೂವರು ಸಹಚರರು ನೀಡಿರೋ ಹೇಳಿಕೆಗಳನ್ನು ಬಹಿರಂಗಪಡಿಸಿಲ್ಲ. ಗೌರಿ ಲಂಕೇಶ್ ಅವರ ಹಿಂದೂ ಧರ್ಮ ವಿರೋಧಿ ಅಭಿಪ್ರಾಯಗಳಿಂದಾಗಿ ಹತ್ಯೆ ನಡೆದಿದೆ ಎಂದು ಎಸ್‍ಐಟಿ ಹೇಳಿದೆ.

ಹಾಗಾದ್ರೆ ಆ ಜಾರ್ಜ್ ಶೀಟ್‍ನಲ್ಲಿ ಏನಿದೆ ಅಂತ ನೋಡೋದಾದ್ರೆ:
1. ಸನಾತನ ಧರ್ಮ ಸಂಸ್ಥಾದೊಂದಿಗೆ ನನ್ನ ಗಂಡ ಸಂಪರ್ಕದಲ್ಲಿದ್ದರು. ಪ್ರಮುಖ ಆರೋಪಿ ಕೆ ಟಿ ನವೀನ್ ಕುಮಾರ್ ಪತ್ನಿ ರೂಪಾರಿಂದ ಸಾಕ್ಷಿ ಹೇಳಿಕೆಯನ್ನು ಚಾರ್ಜ್ ಶೀಟ್‍ನಲ್ಲಿ ದಾಖಲಿಸಲಾಗಿದೆ. ಬಿರೂರಲ್ಲಿ ಕೆಪಿಟಿಸಿಎಲ್‍ನಲ್ಲಿ ಡಿ ಗ್ರೂಪ್ ಉದ್ಯೋಗಿಯಾಗಿ ರೂಪಾ ಕೆಲಸ ಮಾಡಿಕೊಂಡಿದ್ದಾರೆ. 2017ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಸನಾತನ ಸಂಸ್ಥೆಯ ಸದಸ್ಯರಿಗೆ ಪತ್ನಿ ರೂಪಾರನ್ನು ನವೀನ್ ಪರಿಚಯಿಸಿದ್ದನು.

2. ಮೈಸೂರು ದಸರಾಕ್ಕೂ 3 ತಿಂಗಳು ಮೊದಲೇ ಪಿಸ್ತೂಲ್, ಬುಲೆಟ್ ಖರೀದಿಸಲಾಗಿತ್ತು. ಯಾಕೆಂದು ಪತ್ನಿ ಪ್ರಶ್ನಿಸಿದ್ದಾಗ `ಡಮ್ಮಿ’ ಬುಲೆಟ್ ಎಂದು ನವೀನ್ ಹೇಳಿದ್ದನು. ದಸರಾ ವೇಳೆ ಪಿಸ್ತೂಲ್‍ಗೆ ರಕ್ತ ಸುರಿದು ಆಯುಧ ಪೂಜೆ ಮಾಡಿದ್ದನಂತೆ.

Gari Accused 1

3. ದಸರಾ ಬಳಿಕ ಮದ್ದೂರಲ್ಲಿ ಮನೆಗೆ ಸನಾತನ ಸಂಸ್ಥೆಯ ಸದಸ್ಯನನ್ನು ನವೀನ್ ಆಹ್ವಾನಿಸಿದ್ದನು. ಮನೆಗೆ ಆಗಮಿಸಿದ್ದ ಆ ಸದಸ್ಯ ಒಂದು ರಾತ್ರಿ ನವೀನ್ ಮನೆಯಲ್ಲೇ ಉಳಿದುಕೊಂಡಿದ್ದನು.

4. ಗೋವಾದಲ್ಲಿ ಧರ್ಮ ಶಿಕ್ಷಣ ಸಮ್ಮೇಳನಕ್ಕೆ ಆಯ್ಕೆಯಾಗಿದ್ದ 400 ಹಿಂದೂ ಕಾರ್ಯಕರ್ತರಲ್ಲೂ ನವೀನ್ ಕೂಡ ಒಬ್ಬ. ಈ ಸಮ್ಮೇಳನದ 2 ತಿಂಗಳ ಬಳಿಕ ಹುಬ್ಬಳ್ಳಿಯಲ್ಲೂ ಇದೇ ರೀತಿಯ ಸಮ್ಮೇಳನ ನಡೆದಿತ್ತು.

5. ಮಂಗಳೂರಲ್ಲಿರುವ ಸನಾತನ ಆಶ್ರಮಕ್ಕೆ ಪತ್ನಿಯನ್ನು ಕರೆದೊಯ್ಯಲು ದಿನ ನಿಗದಿ ಮಾಡಿದ್ದನು. ಆಶ್ರಮಕ್ಕೆ ಭೇಟಿ ನೀಡಿದ್ದ ದಿನ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಟಿವಿಯಲ್ಲಿ ಪ್ರಸಾರವಾಗ್ತಿತ್ತು.

6. ಗೌರಿ ಹತ್ಯೆಯಾಗಿದೆ ಅನ್ನೋದು ಖಚಿತವಾಗುತ್ತಲ್ಲೇ ಬೆಂಗಳೂರು ಬಿಟ್ಟು ಮಂಗಳೂರಿಗೆ ಹೋಗಿದ್ದನು. ನೇರವಾಗಿ ಮಂಗಳೂರಿಗೆ ಹೋಗೋ ಬದಲು 5 ಬಸ್‍ಗಳನ್ನು ಬದಲಾಯಿಸಿದ್ದನು. ಬಿರೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆಯಲ್ಲಿ ಬಸ್ ಬದಲಾಯಿಸಿ ಮಂಗಳೂರಿಗೆ ಹೋದರು.

Gari Accused 2

7. ಮಂಗಳೂರಿಗೆ ಬಂದವ್ರಿಗೆ ನವೀನ್ ದಂಪತಿಗೆ ಸನಾತನ ಸಂಸ್ಥೆ ಕಾರು ನೀಡಿ ಸತ್ಕರಿಸಿತ್ತು. ಗೌರಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದಾಗ ಸಂಬಂಧವೇ ಇಲ್ಲದಂತೆ ನವೀನ್ ವರ್ತಿಸಿದ್ದನು. ಹತ್ಯೆಯ ಮೂರು ದಿನಗಳ ಬಳಿಕ ಬೆಂಗಳೂರಿಗೆ ಬಂದಿದ್ದ ನವೀನ್.

8. ಡಿಸೆಂಬರ್ 10, 2017ರಂದು ಮದ್ದೂರಲ್ಲಿ ನಡೆದಿದ್ದ ಸಭೆಯ ಬಗ್ಗೆ ಸನಾತನ್ ಆರ್ಗ್, ಹಿಂದೂ ಜಾಗೃತಿ ಆರ್ಗ್ ವೆಬ್‍ಸೈಟ್‍ಗಳಲ್ಲಿ ವರದಿಯ ದಾಖಲೆ. ಈ ಸಭೆಯಲ್ಲಿ ಪ್ರಮುಖ ಆರೋಪಿ ಕೆ ಟಿ ನವೀನ್ ಕುಮಾರ್ ಕೂಡಾ ಪಾಲ್ಗೊಂಡಿದ್ದನು.

9. ಗೌರಿ ಹತ್ಯೆಗಾಗಿ ಸೆಪ್ಟೆಂಬರ್ 2017ರಲ್ಲಿ ಬುಲೆಟ್ ಪೂರೈಕೆ ಮಾಡಿದ್ದ ನವೀನ್ ಬೆಂಗಳೂರಿನ ಕಲಾಸಿಪಾಳ್ಯದಲ್ಲಿರೋ `ಸಿಟಿ ಗನ್ ಹೌಸ್’ನಲ್ಲಿ ಗುಂಡುಗಳನ್ನು ಖರೀದಿಸಿದ್ದನು. 8 ವರ್ಷಗಳ ಹಿಂದೆಯೇ `ಬೆಂಗಳೂರು ಆರ್ಮರಿ’ ಎಂಬ ಅಂಗಡಿಯಿಂದ 3 ಸಾವಿರ ರೂಪಾಯಿ ಕೊಟ್ಟು 18 ಬುಲೆಟ್‍ಗಳನ್ನು ಖರೀದಿಸಲಾಗಿತ್ತು. ತಲಾ 3,500 ರೂಪಾಯಿ ಕೊಟ್ಟು ಎರಡು ಏರ್ ಪಿಸ್ತೂಲ್‍ಗಳ ಖರೀದಿಸಲಾಗಿತ್ತು. ಲೈಸನ್ಸ್ ಇಲ್ಲದೇ ಇದ್ದರೂ ಬುಲೆಟ್, ಪಿಸ್ತೂಲ್ ಕೊಡುವಂತೆ ಅಂಗಡಿ ಮಾಲೀಕರಲ್ಲಿ ನವೀನ್ ಅಂಗಲಾಚಿದ್ದನು.

gauri lankesh case 3

10. ಕತ್ತಿಗೆ ಲಾಕೆಟ್ ಮಾಡಿಸ್ಬೇಕಿದೆ, ಅದಕ್ಕೆ ಬುಲೆಟ್ ಬೇಕು. ಆ ವೇಳೆ ನಾನಾಗ ದುಡ್ಡಿನ ತುರ್ತಲ್ಲಿದೆ. `ಬೆಂಗಳೂರು ಆರ್ಮರಿ’ಯಲ್ಲಿ ನನ್ನ ಸ್ನೇಹಿತ ಅಜ್ಮದ್‍ಗೆ ಟೆಸ್ಟಿಂಗ್ ವೆಸ್ಟೇಜ್ ಬುಲೆಟ್‍ಗಾಗಿ ಕೇಳಿದ್ದೆ. 3 ದಿನಗಳ ಬಳಿಕ 0.32 ಕ್ಯಾಲಿಬರ್‍ನ 18 ಬುಲೆಟ್‍ಗಳನ್ನು ಪೇಪರ್‍ನಲ್ಲಿ ನವೀನ್‍ಗೆ ಕೊಟ್ಟಿದ್ದೇನೆ ಎಂದು `ಸಿಟಿ ಗನ್ ಹೌಸ್’ನ ಸೈಯದ್ ಶಬ್ಬೀರ್ ವಿಶೇಷ ತನಿಖಾ ದಳ ಎದುರು ಹೇಳಿಕೆ ದಾಖಲಿಸಿದ್ದಾನೆ.

11. ಗೌರಿ ಲಂಕೇಶ್ ಮಾತ್ರವಲ್ಲದೇ ಪ್ರೊ.ಕೆ ಎಸ್. ಭಗವಾನ್ ಸೇರಿ ಐವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಸ್ನೇಹಿತ ಅನಿಲ್ ಮತ್ತು ಗಿರಿ ಮಿಲ್ಟ್ರಿ ಜೊತೆಗೆ ಹತ್ಯೆ ಮಾಡುವ ಬಗ್ಗೆ ಹೊಟ್ಟೆ ಮಂಜ ಮಾತಾಡಿದ್ದ.

TAGGED:courtGauri LankeshPublic TVsitಎಸ್‍ಐಟಿಕೋರ್ಟ್ಗೌರಿ ಲಂಕೇಶ್ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema Updates

madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
24 hours ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
2 days ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
2 days ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
3 days ago

You Might Also Like

Bengaluru Chinnaswamy Stampede
Bengaluru City

ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

Public TV
By Public TV
13 minutes ago
Rinku Singh 3
Cricket

ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

Public TV
By Public TV
14 minutes ago
Provide facility every day in prison demand of Harsha murder accused
Bellary

ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

Public TV
By Public TV
20 minutes ago
Chinnaswamy Stadium Stampede Case CM Siddaramaiahs Political Secretary K Govindaraj Sacked
Bengaluru City

ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

Public TV
By Public TV
53 minutes ago
siddaramaiah 11
Districts

ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

Public TV
By Public TV
1 hour ago
DK SHIVAKUMAR
Bengaluru City

ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?