ಕ್ಯಾಂಪೇನ್ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ – ಜಿಪಂ ಸದಸ್ಯನ ಕಾರಿಗೆ ಕಲ್ಲು

Public TV
1 Min Read
HSN GALATE COLLAGE

ಹಾಸನ: ಮತದಾನಕ್ಕೆ 12 ದಿನ ಇರುವಾಗ ಹೊಳೇನರಸೀಪುರ ವಿಧಾನಾಸಭಾ ಕ್ಷೇತ್ರ ರಣಾಂಗಣವಾಗಿದೆ. ಜಿದ್ದಾ ಜಿದ್ದಿನ ಕ್ಷೇತ್ರ ಹೊಳೇನರಸೀಪುರದಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಹೊಡೆದಾಡಿಕೊಂಡಿದ್ದಾರೆ.

ಎ. ಕಾಳೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ವಿಚಾರದಲ್ಲಿ ಆರಂಭವಾದ ಗಲಾಟೆ, ಕಲ್ಲು ತೂರಾಟದಲ್ಲಿ ಅಂತ್ಯವಾಗಿದೆ. ಗ್ರಾಮದಲ್ಲಿ ಪ್ರಚಾರ ನಡೆಸಬಾರದು ಎಂದು ಕಾಂಗ್ರೆಸ್‍ನವರ ವಿರುದ್ಧ ಜೆಡಿಎಸ್ ಗಲಾಟೆ ಮಾಡಿದ್ದಾರೆ.

HSN GALATE 4

ಕಾಂಗ್ರೆಸ್ ಜಿ.ಪಂ ಸದಸ್ಯ ಶ್ರೇಯಸ್ ಪಟೇಲ್ ಕಾರ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಾರ್ ಗಾಜುಗಳು ಪುಡಿ ಪುಡಿಯಾಗಿವೆ. ಉಮೇಶ್ ಎಂಬವರ ಮನೆ ಮೇಲೆಯೂ ಕಲ್ಲು ತೂರಾಟ ನಡೆದಿದೆ.

HSN GALATE

ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಸ್ಥಳಕ್ಕೆ ಎಸ್‍ಪಿ ಭೇಟಿ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಅನುಪಮಾ ಮಹೇಶ್ ಭೇಟಿ ನೀಡಿದ್ದಾರೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಅರೆಸೇನಾ ಪಡೆಯ ತುಕಡಿಯೊಂದನ್ನು ಗ್ರಾಮಕ್ಕೆ ರವಾನಿಸಲಾಗಿದೆ.

ಅಂದಹಾಗೇ ಗಲಾಟೆ ವೇಳೆ ಎ. ಕಾಳೇನಹಳ್ಳಿಯಲ್ಲೇ ಇದ್ದ ಹೆಚ್.ಡಿ.ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ ಕೂಡ ಇದ್ದರು ಎನ್ನಲಾಗಿದೆ.

HSN GALATE 2

Share This Article
Leave a Comment

Leave a Reply

Your email address will not be published. Required fields are marked *