ಆಕಸ್ಮಿಕ ಬೆಂಕಿ ತಗುಲಿ 6 ಏಕರೆ ದಾಳಿಂಬೆ ತೋಟ ಸುಟ್ಟು ಭಸ್ಮ

Public TV
0 Min Read
CKM FIRE AV 2

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ 6 ಏಕರೆ ದಾಳಿಂಬೆ ತೋಟ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದಿದೆ.

ಸುದೀಶ್ ಎಂಬುವರಿಗೆ ಸೇರಿದ ತೋಟದಲ್ಲಿ ಬೆಂಕಿ ಅವಘಡ ನಡೆದಿದೆ. ಆರು ಏಕರೆ ತೋಟದ ಜೊತೆ ಮನೆ ಸಹ ಬೆಂಕಿಗಾಹುತಿಯಾಗಿದೆ. ಒಟ್ಟು ಒಂಭತ್ತು ಏಕರೆ ತೋಟದಲ್ಲಿ ಆರು ಏಕರೆ ಬೆಂಕೆಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

CKM FIRE AV 1

ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

CKM FIRE AV 3

Share This Article
Leave a Comment

Leave a Reply

Your email address will not be published. Required fields are marked *