ಮನೆ ಬಾಗಿಲಲ್ಲೇ ತುಂಬಿ ಹರಿಯುತ್ತೆ ಕೃಷ್ಣಾ ನದಿಯ ಕಾಲುವೆ

Public TV
1 Min Read
YGR CANAL FF

ಯಾದಗಿರಿ: ಇಲ್ಲಿನ ನಿವಾಸಿಗಳು ಮನೆ ಮುಂದೆ ಹರಿಯುವ ನೀರಿನಿಂದ ಭಯಪಡುವಂತಾಗಿದೆ. ಈ ಅಪಾಯದ ಕಾಲುವೆ ಮಕ್ಕಳ ಜೀವವನ್ನೇ ಬಲಿ ಪಡೆದಿವೆ. ಹೀಗಿದ್ದರು ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸುವ ಗೋಜಿಗೆ ಹೋಗಿಲ್ಲ.

ಸಾಮಾನ್ಯವಾಗಿ ಕಾಲುವೆಗಳು ಊರಾಚೆಗಿನ ಹೊಲದಲ್ಲೋ ರಸ್ತೆ ಬದಿಯಲ್ಲೋ ಹರಿಯೋದನ್ನ ನೋಡಿದ್ದೀವಿ. ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೀರದಳ್ಳಿ ತಾಂಡಾದಲ್ಲಿ ಮನೆಗಳ ಮುಂದೆಯೇ ಕಾಲುವೆ ಹರಿಯುತ್ತಿದೆ. ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ಈ ತಾಂಡಾದ ಮನೆಗಳ ಮುಂಭಾಗದಲ್ಲಿದ್ದು, ಯಾವುದೇ ಸುರಕ್ಷಾ ಕ್ರಮಗಳಿಲ್ಲದ ಪರಿಣಾಮ ಇಲ್ಲಿನ ಜನರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಇದೆ.

YGR CANAL 5

ಮಕ್ಕಳು, ವೃದ್ಧರಂತೂ ಇಲ್ಲಿ ನಡೆದುಕೊಂಡು ಹೋಗಲು ಪ್ರಯಾಸ ಪಡುತ್ತಾರೆ. ಇನ್ನೂ ಈ ಹಿಂದೆ ಹಲವು ಮಕ್ಕಳು ಈ ಕಾಲುವೆಗೆ ಬಲಿಯಾಗಿದ್ದಾರಂತೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಈ ಕಾಲುವೆ ನೀರು ಹರಿದು ಹೋಗುವ ಚಿಕ್ಕದಾದ ಸೇತುವೆ ಕೂಡ ಕಿತ್ತು ಹೋಗಿದೆ. 5 ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿದೆ. ಹೆಚ್ಚಿನ ನೀರು ಕಾಲುವೆಗೆ ಬಿಟ್ಟರೆ ಮನೆಗಳಿಗೆ ಹಾಗೂ ಊರಿನೊಳಗೆ ನೀರು ನುಗ್ಗುತ್ತಿವೆ. ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದಾರೆ ಹೊರತು ಕಾಲುವೆಗೆ ತಡೆಗೊಡೆ ನಿರ್ಮಿಸುವ ಕೆಲಸ ಮಾಡಿಲ್ಲ.

YGR CANAL 1

YGR CANAL 3

YGR CANAL 9

YGR CANAL 8

YGR CANAL 6

YGR CANAL 5

YGR CANAL 11

YGR CANAL 10

YGR CANAL 12

YGR CANAL 13

YGR CANAL 14

YGR CANAL 15

YGR CANAL 17

YGR CANAL 18

YGR CANAL 19

YGR CANAL 20

YGR CANAL 16

YGR CANAL 2

YGR CANAL 7

YGR CANAL 4

Share This Article
Leave a Comment

Leave a Reply

Your email address will not be published. Required fields are marked *