ಇಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ

Public TV
1 Min Read
MNG PM

ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಲೆಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

ಶ್ರೀಲಂಕಾದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಸಿಂಘೆ, ಬುಲೆಟ್ ಪ್ರೂಫ್ ಅಂಬಾಸಿಡರ್ ಕಾರಿನಲ್ಲಿ ರಸ್ತೆಯ ಮೂಲಕ ಮಂಗಳೂರು ನಗರಕ್ಕೆ ಆಗಮಿಸಿದರು. ಪತ್ನಿ ಮೈತ್ರಿ ವಿಕ್ರಮ ಸಿಂಘೆ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಗೇಟ್ ವೇ ತ್ರೀ ಸ್ಟಾರ್ ಹೊಟೇಲ್ ನಲ್ಲಿ ಕೆಲಕಾಲ ತಂಗಿದ್ರು.

vlcsnap 2017 11 21 11h25m49s49

ಬಳಿಕ ಅಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸಿದ ಪ್ರಧಾನಿ ದಂಪತಿ, ಚಹಾದ ಜೊತೆಗೆ ಮಂಗಳೂರು ಭಾಗದ ಸಾಂಪ್ರದಾಯಿಕ ಉಪಾಹಾರ ನೀರುದೋಸೆ ಮತ್ತು ಚಟ್ನಿ ಸೇವಿಸಿದ್ರು. ನಂತರ ಹೊಟೇಲ್ ನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತೆರಳಿದ್ರು.

ಮಧ್ಯಾಹ್ನ 3 ಗಂಟೆಗೆ ಮತ್ತೆ ಇದೇ ಗೇಟ್ ವೇ ಹೊಟೇಲಿಗೆ ಆಗಮಿಸಲಿದ್ದು, ಊಟಕ್ಕೆ ಕಾಣೆ ಮೀನಿನ ಸ್ಪೆಷಲ್ ಮೀಲ್ ರೆಡಿ ಮಾಡೋಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

vlcsnap 2017 11 21 11h23m02s133

vlcsnap 2017 11 21 11h23m37s15

vlcsnap 2017 11 21 11h23m59s234

vlcsnap 2017 11 21 11h25m15s223

vlcsnap 2017 11 21 11h25m38s190

vlcsnap 2017 11 21 11h25m56s113

vlcsnap 2017 11 21 11h26m09s235

vlcsnap 2017 11 21 11h26m22s124

vlcsnap 2017 11 21 11h26m28s179

vlcsnap 2017 11 21 11h26m35s0 vlcsnap 2017 11 21 11h26m44s74

 

Share This Article
Leave a Comment

Leave a Reply

Your email address will not be published. Required fields are marked *