ಮದ್ವೆಯಾಗಿ 6 ವರ್ಷದ ನಂತ್ರ ಜನಿಸಿದ ಹಸುಗೂಸು ವೈದ್ಯರ ಮುಷ್ಕರಕ್ಕೆ ಬಲಿ

Public TV
1 Min Read
KLR BABY DEATH COLLAGE

ಕೋಲಾರ: ಖಾಸಗಿ ವೈದ್ಯರ ಮುಷ್ಕರಕ್ಕೆ 4 ತಿಂಗಳ ಹಾಲುಗಲ್ಲದ ಹಸುಗೂಸು ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಹಿರೇಕಟ್ಟಿಗೇನಹಳ್ಳಿಯ ಶ್ವೇತಾ ಹಾಗೂ ಮುನಿಕೃಷ್ಣ ದಂಪತಿಯ 4 ತಿಂಗಳ ಗಂಡು ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಅಂದಹಾಗೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.

KLR BABY DEATH 7

ಚಿಂತಾಮಣಿ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಮುಷ್ಕರದ ಹಿನ್ನೆಲೆಯಲ್ಲಿ ಅಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋದರೂ ಅಲ್ಲೂ ಕೂಡ ಚಿಕಿತ್ಸೆ ದೊರೆತಿಲ್ಲ. ಇನ್ನೇನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಆಂಬುಲೆನ್ಸ್ ನಲ್ಲೇ ಮಗು ಪ್ರಾಣ ಬಿಟ್ಟಿದೆ.

ಶ್ವೇತಾ-ಮುನಿಕೃಷ್ಣ ದಂಪತಿಗೆ ಮದುವೆಯಾದ 6 ವರ್ಷಗಳ ನಂತರ ಈ ಮುದ್ದಾದ ಮಗು ಜನಿಸಿತ್ತು.

KLR BABY DEATH 4

KLR BABY DEATH 3

KLR BABY DEATH 1

Share This Article
Leave a Comment

Leave a Reply

Your email address will not be published. Required fields are marked *