ರಾತ್ರಿ ಗ್ರಾಮದ ಮುಂದೆ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಗೆ ಥಳಿತ!

Public TV
1 Min Read
NML THALITA

ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಜನರಿಗೆ ಘನ ತ್ಯಾಜ್ಯ ಪದೇ ಪದೇ ತಲೆನೋವಾಗಿ ಕಾಡುತ್ತಿದೆ. ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಕ್ಕದ ಹಳ್ಳಿಗಳ ಬಯಲು ಪ್ರದೇಶದಲ್ಲಿ ಕದ್ದುಮುಚ್ಚಿ ಸುರಿಯುವ ಪ್ರಯತ್ನ ನಡೆಯುತ್ತಿದೆ.

ಮೈಲನಹಳ್ಳಿ ಗ್ರಾಮಕ್ಕೆ ಹಲವು ದಿನಗಳಿಂದ ರಾತ್ರೋ ರಾತ್ರಿ ಕೋಳಿ ಕಸ ಸುರಿಯಲಾಗುತ್ತಿದ್ದು, ಗ್ರಾಮದ ತುಂಬೆಲ್ಲಾ ಗಬ್ಬು ವಾಸನೆ ಹರಡಿ ಜನರ ನೆಮ್ಮದಿ ಹಾಳಾಗಿತ್ತು. ಊರಿನ ಜನ ಬೆಳಗ್ಗೆ ಹೊತ್ತು ಎಷ್ಟೇ ಎಚ್ಚರಿಕೆಯಿಂದ ಕಾದರೂ ರಾತ್ರಿ ವೇಳೆ ಕಸ ಸುರಿದು ಪರಾರಿಯಾಗುತ್ತಿದ್ದರು.

ಇದರಿಂದ ರೊಚ್ಚಿಗೆದ್ದ ಜನ ಕಾದು ಕುಳಿತು ಕಸ ಸುರಿಯಲು ಬಂದ ವ್ಯಕ್ತಿಯನ್ನ ಹಿಡಿದು ಥಳಿಸಿ ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಷ್ಟಾದ್ರೂ ಕಸ ಎಲ್ಲಿಂದ ತಂದು ಸುರಿತೀವಿ ಅನ್ನೋ ಮಾಹಿತಿಯನ್ನು ಆ ವ್ಯಕ್ತಿ ಹೇಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

NML THALITA

NML KKL

NML

Share This Article
Leave a Comment

Leave a Reply

Your email address will not be published. Required fields are marked *