Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂಟೆಗಟ್ಟಲೇ ಚಿಲ್ಲರೆ ಹಣವನ್ನು ದೇವರಿಗೆ ಎಸೆಯುತ್ತಾರೆ ಭಕ್ತರು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಮೂಟೆಗಟ್ಟಲೇ ಚಿಲ್ಲರೆ ಹಣವನ್ನು ದೇವರಿಗೆ ಎಸೆಯುತ್ತಾರೆ ಭಕ್ತರು!

Chitradurga

ಮೂಟೆಗಟ್ಟಲೇ ಚಿಲ್ಲರೆ ಹಣವನ್ನು ದೇವರಿಗೆ ಎಸೆಯುತ್ತಾರೆ ಭಕ್ತರು!

Public TV
Last updated: September 19, 2017 2:51 pm
Public TV
Share
2 Min Read
MONEY FESTIVAL COLLAGE
SHARE

ಚಿತ್ರದುರ್ಗ: ಚಿಲ್ಲರೆ ಹಣವನ್ನು ಭಕ್ತರು ದೇವಾಲಯದ ಹುಂಡಿ ಅಥವಾ ತಟ್ಟೆಗೆ ಹಾಕೋದು ಸಾಮಾನ್ಯ. ಆದರೆ ಇಲ್ಲೊಂದು ವಿಶಿಷ್ಟ ಹರಕೆ ಇದೆ. ತಮ್ಮ ಕಷ್ಟಗಳನ್ನು ನಿವಾರಿಸಿದರೆ ಭಕ್ತರು ಚಿಲ್ಲರೆ ಹಣವನ್ನು ದೇವರ ಮೇಲೆ ಎರಚಿ ತಮ್ಮ ಭಕ್ತಿಯನ್ನು ನಿವೇದಿಸಿಕೊಳ್ಳುತ್ತಾರೆ. ಇಂತಹ ವಿಶಿಷ್ಟ ಹರಕೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರದ ವರದರಾಜಸ್ವಾಮಿ ಜಾತ್ರೆಯಲ್ಲಿ ನಡೆಯುತ್ತದೆ.

ಈ ದೇವರನ್ನು ಕಂಚೀ ವರದ ವಿಷ್ಣುವಿನ ಅವತಾರವೆಂದೂ ಪ್ರಸಿದ್ಧಿ ಪಡೆದಿರುವ ದೇವಾಲಯದಲ್ಲಿ ಮೊದಲು ವಜ್ರ ವೈಢೂರ್ಯಗಳನ್ನು ದೇವರ ಮೇಲೆ ಎರಚಿ ತಮ್ಮ ಭಕ್ತಿಯನ್ನ ಸಮರ್ಪಿಸಿಕೊಳ್ಳುತ್ತಿದ್ದರು ಎಂಬ ಇತಿಹಾಸವನ್ನು ಹೊಂದಿದೆ.  ಈ ಹಿನ್ನೆಲೆಯಲ್ಲಿ ಈಗಲೂ ಹರಕೆ ಮಾಡಿಕೊಂಡು ಹಣವನ್ನು ಎಸೆಯುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

vlcsnap 2017 09 19 13h24m57s189

ಉತ್ತರ ಮಳೆಯ ಅಂಬಿನ (ಆರಂಭದ) ಮೊದಲ ಜಾತ್ರೆ ಇದಾಗಿದ್ದು, ರಾಜ್ಯದಲ್ಲಿ ನಡೆಯುವ ಮೊದಲ ಜಾತ್ರೆಯನ್ನು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಜಾತ್ರೆಯಲ್ಲಿ ಭಕ್ತರು ಬಾನ ಬುತ್ತಿಯನ್ನು ತೆಗೆದುಕೊಂಡು ದಶರಥರಾಮೇಶ್ವರ ವಜ್ರಕ್ಕೆ ತೆರಳುತ್ತಾರೆ. ಅಲ್ಲಿ 16 ಸೇರು ಅಕ್ಕಿಯಿಂದ ಅನ್ನ, ಮುದ್ದೆ, ಸಾಂಬಾರ ಮಾಡಿ ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ. ಈ ಸ್ವಾಮಿಗೆ ಸಲ್ಲಿಸಲಾಗುವ ಪೂಜೆಯನ್ನು ನೋಡಲು ಹಾಗೂ ಹರಕೆಯನ್ನು ತೀರಿಸಲು ನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.

vlcsnap 2017 09 19 13h26m15s070

ವಿಶೇಷ ಏನೆಂದರೆ ಭಕ್ತರು ಹೀಗೆ ಎಸೆದ ಹಣ ದೇವಾಲಯ ಸೇರುವುದಿಲ್ಲ. ಬದಲು ಪ್ರಸಾದ ರೂಪದಲ್ಲಿ ಈ ಹಣವನ್ನು ಹೆಕ್ಕಿಕೊಳ್ಳುತ್ತಾರೆ.

ದಸರಾ ಆರಂಭಕ್ಕೂ ಮುನ್ನವೇ ಇಲ್ಲಿ ಜಾತ್ರೆ ಆರಂಭವಾಗುತ್ತದೆ. ಕಂಚಿನ ವರದ ರಾಜಸ್ವಾಮಿಯನ್ನು 16 ದಿನಗಳ ಕಾಲ ಪಟ್ಟಕ್ಕೆ ಕೂರಿಸಿ, 17 ಮತ್ತು 18 ದಿನದಂದು ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲಾಗುತ್ತದೆ. ಈ ಜಾತ್ರೆಗೆ ಆಗಮಿಸುವ ಭಕ್ತರು ಹಣವನ್ನು ತೂರಿ ತಮ್ಮ ಹರಕೆಯನ್ನು ಈಡೇರಿಕೊಳ್ಳುತ್ತಾರೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ದೇವಾಲಯದ ಮಹತ್ವನ್ನು ತಿಳಿಸಿದರು.

vlcsnap 2017 09 19 13h27m02s886

ಭಕ್ತರು ಸಂತಾನ ಭಾಗ್ಯ, ಸರ್ಕಾರಿ ಉದ್ಯೋಗ, ವಿವಾಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಬೇಡಿಕೊಳ್ಳುತ್ತಾರೆ. ಬಿಕಾಂ ಓದುವಾಗ ತನಗೆ ಸರ್ಕಾರಿ ಕೆಲಸ ಸಿಗಬೇಕು ಎಂದು  ಹರಕೆ ಹೇಳಿಕೊಂಡಿದ್ದೆ. ಈಗ ನನಗೆ ಮ್ಯಾನೇಜ್‍ಮೆಂಟ್ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸವೂ ಸಿಕ್ಕಿದೆ. ಆದ್ದರಿಂದ ನಾನು ನನ್ನ ಮೊದಲ ಸಂಬಳದಿಂದ ಎಂಟು ಸಾವಿರ ರೂ. ಹಣವನ್ನು ದೇವರಿಗೆ ತೂರುತ್ತಿದ್ದೇನೆ ಎಂದು ಭಕ್ತೆ ಮಮತಾ ಮಾಧ್ಯಮಗಳಿಗೆ ಹೇಳಿದರು.

ಹರಕೆಯನ್ನು ಬೇಡಿಕೊಂಡವರಿಗೆ ವರವನ್ನು ನೀಡುವ ವರದಯ್ಯನಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರತೀ ವರ್ಷವು ಭಕ್ತರು ತಮ್ಮ ಕಷ್ಟಗಳನ್ನು ತೀರಿಸುವ ವರದ ದಶರಥರಾಮೇಶ್ವರರಿಗೆ ತಮ್ಮ ಕಾಣಿಕೆಯನ್ನು ಸಮರ್ಪಿಸಿಕೊಳ್ಳುತ್ತಾರೆ ಎಂದು ಜಾತ್ರೆಗೆ ಆಗಮಿಸಿದ ಭಕ್ತೆ ಶಾರದಮ್ಮ ತಿಳಿಸಿದರು.

TAGGED:ChitradurgaMinister B.G GovindappaPublic TVVaradaraja Swamyಚಿತ್ರದುರ್ಗಪಬ್ಲಿಕ್ ಟಿವಿವರದರಾಜಸ್ವಾಮಿ ಜಾತ್ರೆವಿಶಿಷ್ಟ ಹರಕೆಶಾಸಕ ಬಿ.ಜಿ. ಗೋವಿಂದಪ್ಪ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

f 15e strike eagle how rescued
Latest

ಫೈಟರ್‌ ಜೆಟ್‌ನಿಂದ ಬಿದ್ದ ಪೈಲಟ್‌ನನ್ನು ಅಮೆರಿಕ ನಿಖರವಾಗಿ ಇರಾನ್‌ ನೆಲದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ?

Public TV
By Public TV
2 minutes ago
Mohsin Naqvi
Cricket

ಐಪಿಎಲ್‌ ಅನ್ನು ಪಿಎಸ್‌ಎಲ್‌ ಹಿಂದಿಕ್ಕಿ ವಿಶ್ವದ ನಂ.1 ಲೀಗ್‌ ಆಗುತ್ತೆ: ಮೊಹ್ಸಿನ್‌ ನಖ್ವಿ

Public TV
By Public TV
22 minutes ago
Siddaganga Mutt
Districts

ಸಿದ್ದಗಂಗಾ ಮಠದಲ್ಲಿ 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

Public TV
By Public TV
41 minutes ago
zameer ahmed s.s.mallikarjun
Davanagere

ಎಷ್ಟೇ ಒತ್ತಾಯ ಮಾಡಿದ್ರೂ ದಾವಣಗೆರೆಯಲ್ಲಿ ಪ್ರಚಾರಕ್ಕೆ ಒಪ್ಪದೇ ತೆರಳಿದ ಜಮೀರ್

Public TV
By Public TV
52 minutes ago
Hyderabad truck accident
Crime

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿಮೀ ಎಳೆದೊಯ್ದ ಟ್ರಕ್‌ – ಮಹಿಳೆ ಸಾವು, ಪತಿಗೆ ಗಾಯ

Public TV
By Public TV
2 hours ago
USA F 15E Strike Eagle Eagle 2
Latest

Explained| ಇರಾನ್‌ ಅಮೆರಿಕದ F-15E Strike Eagle ವಿಮಾನವನ್ನು ಹೊಡೆದು ಹಾಕಿದ್ದು ಹೇಗೆ? ರಷ್ಯಾದ ಪಾತ್ರ ಏನು?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?