ಚುನಾವಣೆ ಗೆಲ್ಲೋದು ಒಂದೇ ಸದ್ಯದ ನನ್ನ ಗುರಿ: ಸತೀಶ್ ಜಾರಕಿಹೊಳಿ

Public TV
1 Min Read
BLG SATISH JARKIHOLI

ಬೆಳಗಾವಿ: ಚುನಾವಣೆ ಗೆಲ್ಲೋದು ಒಂದೇ ಸದ್ಯದ ನನ್ನ ಗುರಿ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುಳೇಭಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಕೆಶಿ, ರಮೇಶ್ ಜಾರಕಿಹೊಳಿಯ ವಾಗ್ದಾಳಿ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಅವರ ಹೆಸರು ಪ್ರಸ್ತಾಪ ಮಾಡಿಲ್ಲ. ಅವರು ನನ್ನ ಹೆಸರು ಕೂಡಾ ಪ್ರಸ್ತಾಪ ಮಾಡಿಲ್ಲ. ಜಿಲ್ಲೆಗೆ ಸೀಮತವಾಗಿ ಮಾತನಾಡಿದ್ದೇವೆ ಅಷ್ಟೆ ಎಂದು ಹೇಳಿದರು.

ನೇರವಾಗಿ ನನ್ನ ಹೆಸರು ಪ್ರಸಾಪ ಮಾಡಿಲ್ಲ. ಹಾಗಾಗಿ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಕೇವಲ ಬೆಳಗಾವಿಗೆ ಸೀಮಿತವಾಗಿಲ್ಲ. ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾವುದು. ಸರ್ವೇ ಮೂಲಕ ಗೆಲ್ಲುವ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಲು ಶಿಫಾರಸು ಮಾಡಲಾಗಿದೆ ಎಂದರು.

ಸಚಿವ ರಮೇಶ ಜಾರಕಿಹೊಳಿ ಸೋಸಲಿಸಲು ನಾನು ಯತ್ನಿಸಿಲ್ಲ. ಜಾರಕಿಹೊಳಿ ಕುಟುಂಬ ಎಂದು ಎಲ್ಲರೂ ಓಟ್ ಹಾಕಿದ್ದಾರೆ. ಒಂದು ವೇಳೆ ಅವರು ಹಾಗೆ ಭಾವಿಸಿದ್ದರೆ ಅವರ ಕಲ್ಪನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ವಿಭಜನೆ ಮಾಡೋ ಪ್ರಸ್ತಾಪನೆ ಇದೆ. ದೊಡ್ಡ ಜಿಲ್ಲೆ ಇರೋದರಿಂದ ಜಿಲ್ಲೆ ವಿಭಜನೆ ಮಾಡೋಕೆ ಬೇಡಿಕೆ ಇತ್ತು. ಆದರೆ ಇದೀಗ ಈ ಬೇಡಿಕೆಗೆ ಹೆಚ್ಚು ವೇಗ ಸಿಕ್ಕಿದೆ ಎಂದು ಹೇಳಿದರು.

BLG SATISH JARKIHOLI 2

BLG SATISH JARKIHOLI3

 

Share This Article
Leave a Comment

Leave a Reply

Your email address will not be published. Required fields are marked *