ಗೌರಿ ಲಂಕೇಶ್ ಆಪ್ತ ಭಾಸ್ಕರ್ ಪ್ರಸಾದ್‍ಗೆ ಜೀವ ಬೆದರಿಕೆ

Public TV
1 Min Read
gauri lankesh and bhaskar prasad

ಬೆಂಗಳೂರು: ಗೌರಿ ಲಂಕೇಶ್ ಆಪ್ತ ಭಾಸ್ಕರ್ ಪ್ರಸಾದ್‍ಗೆ ಜೀವ ಬೆದರಿಕೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಡಿಜಿ ಕಚೇರಿಯಲ್ಲಿ ದೂರು ನೀಡಿದ್ದಾರೆ.

ಬುಧವಾರ ರಾತ್ರಿ 1:30ಕ್ಕೆ ಮಂಗಳೂರು ಮೂಲದ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಮೂರೆ ಮೂರು ದಿನಗಳಲ್ಲಿ ಹತ್ಯೆ ಮಾಡುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಸಿದ್ದಾನೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ. ಕರೆ ಬಂದ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ಸಾಹಿತಿ ಗೌರಿ ಲಂಕೇಶ್ ಹತ್ಯೆಯಾದ ನಂತರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಗನ್‍ಮ್ಯಾನ್ ನೀಡಿದ್ದಾರೆ.

https://youtu.be/E-2vEpV_WFE

https://youtu.be/L-9u5qyk-TQ

https://youtu.be/lldSl2t55M0

Share This Article
Leave a Comment

Leave a Reply

Your email address will not be published. Required fields are marked *