ಮಾತೆ ಮಹಾದೇವಿ ಅಲ್ಲ, ಆಕೆ ಮಾತಿನ ದೆವ್ವ: ಶಾಂತವೀರ ಸ್ವಾಮೀಜಿ

Public TV
1 Min Read
BGK KOLALE SWAMIJI 1

ಬಾಗಲಕೋಟೆ: ಗುರುದ್ರೋಹ ಕೆಲಸ ಮಾಡಿದ ಆಕೆ ಮಾತೆ ಮಹಾದೇವಿ ಅಲ್ಲ. ಅವಳೊಬ್ಬಳು ಮಾತಿನ ದೆವ್ವ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ.

ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾತೆ ಮಹಾದೇವಿಗೂ ವೀರಶೈವ ಧರ್ಮಕ್ಕೂ ಯಾವುದೇ ಸಂಬಂಧವೇ ಇಲ್ಲ. ಅವರು ಗುರುದ್ರೋಹಿ, ಕೂಡಲಸಂಗಮದೇವ ಎಂಬ ಅಂಕಿತನಾಮ ತೆಗೆದುಹಾಕಿ ಲಿಂಗದೇವ ಅಂತಾ ಹೇಳುತ್ತಿದ್ದಾರೆ. ಆ ಲಿಂಗದೇವ ಯಾರು? ಅವನು ಎಲ್ಲಿದ್ದಾನೆ? ಇವಳಿಗೂ ಆ ಲಿಂಗದೇವರಿಗೂ ಏನು ಸಂಬಂಧ ಎಂದು ಏಕವಚನದಲ್ಲಿ ಮಾತೆ ಮಹಾದೇವಿ ಅವರನ್ನು ಪ್ರಶ್ನೆಮಾಡಿದ್ದಾರೆ.

ಅಲ್ಲದೇ ಮಾತೆ ಮಹಾದೇವಿಗೂ ಲಿಂಗದೇವರ ಸಂಭಂದ ಎಂತಹದ್ದೂ ಎಂದು ಅವರೇ ಹೇಳಬೇಕು. ವೀರಶೈವ ಧರ್ಮ ಪ್ರಾಚೀನವಾದ ಧರ್ಮ, ವೀರಶೈವ ಲಿಂಗಾಯತ ನಾವೆಲ್ಲರೂ ಒಂದೇ. ಮಾತೆ ಮಹಾದೇವಿ ಹುಡುಗಾಟವನ್ನು ಬಿಟ್ಟು ನ್ಯಾಯಯುತವಾಗಿ ಬಂದ ವೀರಶೈವ ಧರ್ಮದ ಅನುಯಾಯಾಗಿ ಬಾಳಬೇಕಾದ್ದದು ಕರ್ತವ್ಯ ಎಂದು ತಿಳಿಸಿದರು.

https://youtu.be/5xeheZN7YoQ

BGK KOLALE SWAMIJI 2

 

Share This Article
Leave a Comment

Leave a Reply

Your email address will not be published. Required fields are marked *