ಅಮಿತ್ ಶಾ ವಿರುದ್ಧ ಮಾಜಿ ಸಚಿವ ಎಚ್ ವಿಶ್ವನಾಥ್ ಕಿಡಿ

Public TV
1 Min Read
AMITH VISHWANATH

ಮಂಡ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಸ್ಕೃತಿ ಇಲ್ಲದವರು ಅಂತಾ ಮಾಜಿ ಸಚಿವ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಎದುರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತ ವಿಚಾರವಾಗಿ ಮಂಡ್ಯ ಜಿಲ್ಲೆ ಕೆಆರ್‍ಪೇಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯವ್ರು ದೇಶಭಕ್ತಿ ರಾಷ್ಟ್ರ ಭಕ್ತಿ ಅಂತಾರೆ. ನಾವು ಸೇರಿದಂತೆ ಯಾರಾದ್ರೂ ಜಗದ್ಗುರು ಎದುರು ಹಾಗೇ ಕುಳಿತುಕೊಳ್ತಾರ ಎಂದು ಪ್ರಶ್ನೆ ಮಾಡಿದ್ರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಬಗ್ಗೆಯೂ ಮಾತನಾಡಿದ ಅವರು, ಇಬ್ಬರೂ ಶೂ ಹಾಕಿಕೊಂಡು ಪೂಜೆ ಮಾಡುವ ಬಗ್ಗೆ ವ್ಯಂಗ್ಯವಾಡಿದ್ರು. ಜೊತೆಗೆ ಮಾಧ್ಯಮಗಳಲ್ಲಿ ರಾಷ್ಟ್ರಾದ್ಯಂತ ಜನರು ನಮ್ಮನ್ನು ನೋಡುತ್ತಿರುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ರಾಜಕಾರಣಿಗಳಿಗೆ ವಿಶ್ವನಾಥ್ ಕಿವಿಮಾತು ಹೇಳಿದ್ರು.

AMITH SHAH 1

AMITH SHAH

Share This Article
Leave a Comment

Leave a Reply

Your email address will not be published. Required fields are marked *