ಗ್ಯಾಸ್ ಕಟ್ಟರ್ ನಿಂದ ದೇವಸ್ಥಾನದ ಬಾಗಿಲು ಮುರಿದು ವಿಗ್ರಹಗಳ ಕಳವು

Public TV
0 Min Read
CTD THEFT AV 2

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಓಬಳಪುರ ಗ್ರಾಮದಲ್ಲಿ ದೇವಸ್ಥಾನವೊಂದರ ವಿಗ್ರಹವನ್ನು ಖದೀಮರು ರಾತ್ರೋರಾತ್ರಿ ಕದ್ದೊಯ್ದ ಘಟನೆ ನಡೆದಿದೆ.

CTD THEFT AV 5

ಗ್ರಾಮದ ಹೊರವಲಯದ ಐತಿಹಾಸಿಕ ಸಿದ್ದರಾಮೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಗ್ಯಾಸ್ ಕಟ್ಟರ್ ಬಳಸಿ ದೇವಾಲಯದ ಬಾಗಿಲು ಮುರಿದು ನಂದಿ ವಿಗ್ರಹಗಳು, ಹುಂಡಿಯಲ್ಲಿದ್ದ ಹಣ ಹಾಗೂ ಸಿ.ಸಿ.ಟಿವಿಯನ್ನ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪರಶುರಾಮಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

CTD THEFT AV 4

Share This Article
Leave a Comment

Leave a Reply

Your email address will not be published. Required fields are marked *