ಬೆಂಗಳೂರು: ಇ.ಡಿ (ED) ವಿಚಾರಣೆ ಎದುರಿಸಲು ನಮ್ಮ ಕುಟುಂಬ ರೆಡಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಡಿಕೆ ಸುರೇಶ್ (DK Suresh) ಇ.ಡಿ ತನಿಖೆಗೆ ಹೋಗಿರುವ ವಿಚಾರದ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು, ನಮ್ಮ ಕುಟುಂಬ ಇ.ಡಿ ಫೇಸ್ ಮಾಡೋಕೆ ರೆಡಿ ಇದ್ದೇವೆ. ಇಡಿ ಕೇಸ್ ಆಯ್ತು, ಯಾರೂ ನಮ್ಮ ರಕ್ಷಣೆಗೆ ಬಂದಿಲ್ಲ. ಕೊನೆಗೆ ನ್ಯಾಯಾಲಯ ರಕ್ಷಣೆಗೆ ಬಂದಿದ್ದು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಜನಪ್ರತಿನಿಧಿಗಳನ್ನ ಯಾರು ಬೇಕಿದ್ರು ಭೇಟಿ ಮಾಡಬಹುದು. ಅದನ್ನ ಯಾಕೆ ನೀವು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದರು. ಇದನ್ನೂ ಓದಿ: `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು
ಗ್ರಾಮ ಸಭೆಯಲ್ಲಿ ಕಮಿಷನ್ ಕೊಟ್ಟು ಮನೆ ಪಡೆಯುವ ಬಿಆರ್ ಪಾಟೀಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನಾನು ಏನು ಹೇಳಬೇಕೋ ಹೇಳಿದ್ದೀನಿ. ಸಿಎಂ ಮತ್ತು ವಸತಿ ಸಚಿವರು ಅದಕ್ಕೆ ಉತ್ತರ ಕೊಡುತ್ತಾರೆ. ಶಾಸಕರ ಗಮನಕ್ಕೆ ಬರದೇ ಅನುದಾನ ತೆಗೆದುಕೊಂಡು ಹೋಗುವ, ರಾಜೀನಾಮೆ ಕೊಡುವ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು