ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ಗೆ ನಟ ಶಬರೀಶ್ ಶೆಟ್ಟಿ ದೂರು ನೀಡಿದ್ದಾರೆ. ಹಲವು ದಾಖಲೆಗಳನ್ನೊಳಗೊಂಡ ಪ್ರತಿ ಸಮೇತ ಅಧ್ಯಕ್ಷ ನರಸಿಂಹಲು ಬಳಿ ದೂರುಪತ್ರ ನೀಡಿದ್ದಾರೆ ಯುವ ನಟ ಶಬರೀಶ್.
ನಿರ್ದೇಶಕ ನಂದಕಿಶೋರ್ ಯುವನಟನಿಗೆ 22 ಲಕ್ಷ ಹಣ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ದೂರು ಸ್ವೀಕರಿಸಿದ ಫಿಲ್ಮ್ ಚೇಂಬರ್ ನಿರ್ದೇಶಕ, ನಂದಕಿಶೋರ್ರನ್ನು ಚೇಂಬರ್ಗೆ ಕರೆಸಿ ವಿಚಾರಣೆ ನಡೆಸೋದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್
ಶಬರೀಶ್ಗೆ ಸುದೀಪ್ ಅವರ ಪರಿಚಯ ಮಾಡಿಸೋದು, ಅವರ ಕ್ಯಾಪ್ಟನ್ಶಿಪ್ನಲ್ಲಿ ನಡೆಯುವ ಸಿಸಿಎಲ್ ಕ್ರಿಕೆಟ್ ಮ್ಯಾಚ್ನಲ್ಲಿ ಅವಕಾಶ ಕೊಡಿಸೋದು, ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಚಾನ್ಸ್ ಕೊಡಿಸೋದಾಗಿ ಭರವಸೆ ಕೊಡುತ್ತಾ ಬಂದಿದ್ದರಂತೆ ನಂದಕಿಶೋರ್. ಹಣ ಕೇಳ್ದಾಗೆಲ್ಲ ತಪ್ಪಿಸಿಕೊಳ್ಳುತ್ತಾ ಬಂದಿದ್ದರಂತೆ. ಹಿಂದೊಮ್ಮೆ ಕಿಚ್ಚ ಸುದೀಪ್ರನ್ನ ಭೇಟಿ ಮಾಡಿಸಿ ವಿಶ್ವಾಸ ಮೂಡಿಸಿದ್ದ ನಂದಕಿಶೋರ್ ಬಳಿಕ ತಮ್ಮನ್ನು ಯಾಮಾರಿಸಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ತಿಳಿಸಿದ್ದಾರೆ.
ಶಬರೀಶ್ ಹೇಳೋದೇನು ?
ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ನಾನು, ಬಹುಶಃ ಈಗ ಅವರಿಗೆ ವಿಷಯ ತಿಳಿದಿರುತ್ತೆ. ಅವರನ್ನ ಮೊದಲು ಭೇಟಿ ಮಾಡಿಸಿ ವಿಶ್ವಾಸ ಗಳಿಸಿದ್ದ ನಂದಕಿಶೋರ್ ಅವರು ಬಳಿಕ ಅವರನ್ನ ಪರಿಚಯ ಮಾಡಿಸಿಕೊಡೋದಾಗಿ ಹೇಳಿ. ಹಣ ಪೀಕುತ್ತಾ ಬಂದಿದ್ರು. ಸುದೀಪ್ ಸರ್ ನನ್ನ ಪಾಲಿನ ದೇವರು, ಅವರ ಬಳಿ ಹೋಗಿ ಕಂಪ್ಲೇಟ್ ಮಾಡುವಷ್ಟು ಸಂಪರ್ಕ ಇಂಡಸ್ಟ್ರೀಯಲ್ಲಿ ನನಗಿಲ್ಲ. ಅವರಿಗೆ ಗೊತ್ತಾದ್ರೂ ಅವ್ರೇನ್ ಮಾಡ್ತಾರೆ ಪಾಪ. ಅವರಿಗೂ ಈ ಪ್ರಕರಣಕ್ಕೂ ಏನೂ ಸಂಬಂಧ ಇಲ್ಲ. ಈಗ ಸಿನಿಮಾ ರಿಲೀಸ್ ಮಾಡುವುದಕ್ಕೂ ನನ್ನ ಬಳಿ ದುಡ್ಡಿಲ್ಲ. ಹೀಗಾಗೇ ದೂರು ಕೊಡಲು ಮುಂದಾಗಿದ್ದೇನೆ. ಫಿಲ್ಮ್ ಚೇಂಬರ್ನಲ್ಲಿ ನನ್ನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ಮಾಡ್ತೀನಿ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ