ಮಂಡ್ಯ: ಅಮ್ಯೂಸ್ಮೆಂಟ್ ಪಾರ್ಕ್ ಮಾಡಲು ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸ್ಥಳಗಳು ಇವೆ, ಕೆಆರ್ಎಸ್ನಲ್ಲಿ (KRS) ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಯದುವೀರ್ ಒಡೆಯರ್ (Yaduveer Wodeyar) ಹೇಳಿದ್ದಾರೆ.
ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ನಾನು ಅಭಿವೃದ್ಧಿಗೆ ವಿರೋಧಿ ಅಲ್ಲ. ಅಭಿವೃದ್ಧಿಯೂ ಬೇಕು, ಆದರೆ ಕೆಆರ್ಎಸ್ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ (KRS Amusement park) ಹೆಸರಿನಲ್ಲಿ ಬೇಡ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಜಾಗಗಳು ಇವೆ. ಕೆಆರ್ಎಸ್ ಹೊರತುಪಡಿಸಿ ಸೂಕ್ತ ಜಾಗದಲ್ಲಿ ರೈತರ ಅಭಿಪ್ರಾಯಗಳನ್ನು ಪರಿಗಣಿಸಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
ಕೆಆರ್ಎಸ್ ನಿರ್ಮಾಣವಾಗಿ 100 ವರ್ಷಗಳು ತುಂಬುತ್ತಿವೆ. ಹೀಗಾಗಿ ಡ್ಯಾಂ ಸೇಫ್ಟಿಗೆ ನಾವೆಲ್ಲರೂ ಮೊದಲ ಆದ್ಯತೆ ಕೊಡಬೇಕಿದೆ. ಕೆಆರ್ಎಸ್ ಸುತ್ತಮುತ್ತಲು ನೈಸರ್ಗಿಕವಾದ ಪ್ರಕೃತಿ ತುಂಬಾ ಚೆನ್ನಾಗಿ ಇದೆ. ಸದ್ಯ ಈಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಕೆಆರ್ಎಸ್ಗೆ ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯ ನೀಡಿದರೆ ಸಾಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್
ಇನ್ನೂ ಕೆಆರ್ಎಸ್ನಲ್ಲಿ ಕಾವೇರಿ ಆರತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳಿಗೆ ನಮ್ಮ ವಿರೋಧ ಇಲ್ಲ. ಆದರೆ 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮಾಡೋದು ಸರಿಯಲ್ಲ. ನಾನು ಅಮ್ಯೂಸ್ಮೆಂಟ್ ಪಾರ್ಕ್ ಸೇರಿ, 100 ಕೋಟಿ ರೂ. ಅಂದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ 100 ಕೋಟಿ ರೂ. ಕಾವೇರಿ ಆರತಿ ಅಂದ್ರೆ ಹೇಗೆ? ನಾವು ಎಲ್ಲಿಯೂ ಸಹ 100 ಕೋಟಿ ರೂ. ವೆಚ್ಚದ ಆರತಿಯನ್ನು ನೋಡಿಲ್ಲ. ಬಿಜೆಪಿ ಬೇಕಿದ್ದರೆ ಕಾವೇರಿ ಆರತಿಯನ್ನ ಫ್ರೀಯಾಗಿ ಮಾಡಿಕೊಡುತ್ತೆ ಎಂದು ಟಕ್ಕರ್ ನೀಡಿದ್ದಾರೆ.