ಮುರುಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ

Public TV
1 Min Read
KARWAR RESCUE

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂರು ಜನರನ್ನು ಲೈಫ್ ಗಾರ್ಡ್‍ಗಳು (Life Guard) ರಕ್ಷಣೆ ಮಾಡಿದ್ದಾರೆ.

ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ (Murudeshwara) ಕಡಲ ತೀರದಲ್ಲಿ ನಡೆದಿದೆ. ಹಾವೇರಿ ಮೂಲದ ಹಂಸಬಾವಿಯ ಸಿದ್ದಾರ್ಥ್ (24), ದೀಕ್ಷಿತ್ (20), ಸಂತೋಷ್ (24) ರಕ್ಷಣೆಗೊಳಗಾದವರು.

ಲೈಫ್ ಗಾರ್ಡ್‍ಗಳಾದ ಚಂದ್ರಶೇಖರ್ ದೇವಾಡಿಗ, ಜಯರಾಮ್, ಪಾಂಡು, ಹನುಮಂತು ರಕ್ಷಣೆ ಮಾಡಿದ ಲೈಫ್ ಗಾರ್ಡ್‍ಗಳಾಗಿದ್ದಾರೆ. ಐದು ಜನರ ತಂಡ ಧರ್ಮಸ್ಥಳಕ್ಕೆ (Dharmasthala) ಹೋಗಿ ಮುರುಡೇಶ್ವರಕ್ಕೆ ಇಂದು ಆಗಮಿಸಿದ್ದರು. ಅಂತೆಯೇ ಅವರು ಸಮುದ್ರಕ್ಕೆ ಇಳಿದಿದ್ದು, ಈ ವೇಳೆ ಅಲೆಗಳಿಗೆ ಕೊಚ್ಚಿಹೋಗಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article