ಬೀದರ್: ಕೇದಾರನಾಥ (Kedarnath Temple) ಹಾಗೂ ಭದ್ರಿನಾಥ ದೇವಸ್ಥಾನಕ್ಕೆ (Badrinath Temple) ಹೋದ 15 ಜನ ಕನ್ನಡಿಗರು (Kannadigas) ಭಾರೀ ಗುಡ್ಡ ಕುಸಿತವಾದ ಪರಿಣಾಮ ಉತ್ತರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉತ್ತರ ಭಾರತಕ್ಕೆ ದೇವರ ದರ್ಶನಕ್ಕೆ ಹೋಗಿದ್ದ ಬೀದರ್ ಜಿಲ್ಲೆಯ 5, ಕಲಬುರಗಿ ಜಿಲ್ಲೆಯ 10 ಜನ ಯಾತ್ರಿಗಳು ಸೇರಿದಂತೆ ಒಟ್ಟು 15 ಮಂದಿ ಕನ್ನಡಿಗರು ತೊಂದರೆಗೆ ಸಿಲುಕಿದ್ದಾರೆ. ಭದ್ರಿನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಹರಿದ್ವಾರಕ್ಕೆ ಬರುವ ಮಾರ್ಗದಲ್ಲಿ ಭಾರಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭದ್ರಿನಾಥ ದೇವಸ್ಥಾನಕ್ಕೆ ಸದ್ಯ ಯಾರೂ ಬರಬೇಡಿ. ಇಲ್ಲಿ ಭಾರೀ ಮಳೆಯಾಗುತ್ತಿದೆ. ಜೋತೆಗೆ ಗುಡ್ಡಗಾಡು ಪ್ರದೇಶವಿದ್ದ ದೊಡ್ಡ ದೊಡ್ಡ ಗುಡ್ಡಗಳು ಕುಸಿಯುತ್ತಿವೆ. ಹೀಗಾಗಿ ರಸ್ತೆ ಸಂಪರ್ಕ ಕಡಿತಗೊಳುತ್ತಿವೆ ಎಂದು ಬೀದರ್ ಮೂಲದ ಮಹೇಶ ʼಪಬ್ಲಿಕ್ ಟಿವಿʼ ಮೂಲಕ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]