Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಸಬ್‌ಮರ್ಸಿಬಲ್ ದುರಂತ ಅಂತ್ಯ – ಅಂದು ಏನಾಗಿರಬಹುದು?

Public TV
Last updated: July 5, 2023 2:53 pm
Public TV
Share
3 Min Read
Titan
SHARE

ಸಮುದ್ರದ (Sea) ಆಳ, ಭೂಮಿಯ ಅಜ್ಞಾತ ಪ್ರದೇಶವಾಗಿಯೇ ಉಳಿದಿದೆ. ಇಂದಿಗೂ ಪ್ರಕೃತಿ ಇಲ್ಲಿನ ಆನೇಕ ರಹಸ್ಯಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ. ಆಳವಾದ ಸಮುದ್ರದಲ್ಲಿರುವ ನೀರಿನ ಒತ್ತಡ. ಸಮುದ್ರದ ಆಳದಲ್ಲಿ ಮೇಲ್ಮಟ್ಟಕ್ಕಿಂತ 1,000 ಪಟ್ಟು ಹೆಚ್ಚಿನ ಒತ್ತಡ ಹೊಂದಿರುತ್ತದೆ. ಈ ಒತ್ತಡವೂ ಸದೃಢವಾದ ಹಡಗನ್ನು ಸಹ ಪುಡಿ ಮಾಡಬಲ್ಲಷ್ಟು ಪ್ರಬಲವಾಗಿರುತ್ತದೆ.

ಇದೇ ಕಾರಣಕ್ಕೆ, ಆಳವಾದ ಸಮುದ್ರದ ತೀವ್ರ ಒತ್ತಡ, ಕಡಿಮೆ ತಾಪಮಾನ ಮತ್ತು ಕತ್ತಲೆಯ ನಡುವೆಯೂ ಕಾರ್ಯ ನಿರ್ವಹಿಸುವಂತೆ ನಿರ್ಮಾಣ ಮಾಡಲಾಗಿಯೂ ಸಹ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಸಬ್‌ಮರ್ಸಿಬಲ್ (Submersible) ಪತನವಾಯಿತು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

ಜೂನ್ 18 ರಂದು ದುರಂತ ಅಂತ್ಯ ಕಂಡ ಜಲಾಂತರ್ಗಾಮಿ (Titan Tragedy) ಸಮುದ್ರದ ಆಳದ ಒತ್ತಡವನ್ನು ತಡೆದುಕೊಳ್ಳುವಂತೆ ಮೇಲ್ನೋಟಕ್ಕೆ ವಿನ್ಯಾಸಗೊಳಿಸಲಾಗಿತ್ತು. ಇದು ಕಾರ್ಯಾಚರಣೆಯ ದುರಂತಕ್ಕೆ ಕಾರಣವಾಯಿತು. ಒಂದು ವಾರದ ತೀವ್ರ ಶೋಧದ ಬಳಿಕ ಅಮೆರಿಕಾ ಕೋಸ್ಟ್ ಗಾರ್ಡ್ ಸಬ್‌ಮರ್ಸಿಬಲ್‌ನಲ್ಲಿ  ತೆರಳಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.

Titanic

ಸಮುದ್ರದ ಮೇಲ್ಮೈಯಿಂದ 12,000 ಅಡಿಗಳಿಗಿಂತ ಹೆಚ್ಚು ಆಳದಲ್ಲಿದ್ದ ಟೈಟಾನಿಕ್ (Titanic) ಅವಶೇಷಗಳಿರುವ ಜಾಗಕ್ಕೆ ತೆರಳುವುದು ಅಪಾಯಕಾರಿಯಾಗಿತ್ತು. ಈ ಶೋಧನೆಯ ಪ್ರಯಾಸಗಳು ತಿಳಿದಿದ್ದರೂ ಸಹ ಯತ್ನಕ್ಕೆ ಕೈ ಹಾಕಿರುವುದು ಒಂದು ಬಗೆಯಲ್ಲಿ ದುರಂತಕ್ಕೆ ಆಹ್ವಾನ ಕೊಟ್ಟಂತೆಯೇ ಇತ್ತು. ಆದರೆ ದುರಂತದ ಸಮಯದಲ್ಲಿ ನಿಖರವಾಗಿ ಏನು ತಪ್ಪಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ತಿಳಿದಿರುವ ಸಂಗತಿ ಅಂದರೆ, ಸಬ್‌ಮರ್ಸಿಬಲ್ ಸ್ಫೋಟಕ್ಕೆ ಒಳಗಾಯಿತು ಎಂಬುದಷ್ಟೇ ಆಗಿದೆ.

ಸಾಗರದ ಆಳ ಮತ್ತು ನೀರಿನ ಒತ್ತಡ
ಸಾಗರವನ್ನು ಹಲವಾರು ಪದರಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪದರಗಳು ಸೂರ್ಯನ ಬೆಳಕಿನ ವಲಯ, ಟ್ವಿಲೈಟ್ ವಲಯ, ಮಧ್ಯರಾತ್ರಿ ವಲಯ, ಪ್ರಪಾತ ವಲಯ ಮತ್ತು ಹಡಲ್ ವಲಯವಾಗಿ (ಕೊನೆಯದು ಆಳವಾದದ್ದು) ವಿಂಗಡಿಸಲಾಗಿದೆ.

ಸೂರ್ಯನ ಬೆಳಕಿನ ವಲಯವು ಮೇಲ್ಮೈಯಿಂದ ಸುಮಾರು 200 ಮೀಟರ್ ಆಳದವರೆಗಿನ ಹೆಚ್ಚಿನ ಸಮುದ್ರ ಜೀವಿಗಳು ಮತ್ತು ಮಾನವ ಚಟುವಟಿಕೆಗಳಿಗೆ ಯೋಗ್ಯವಾದದ್ದು. ಟ್ವಿಲೈಟ್ ವಲಯಕ್ಕೆ (200 ರಿಂದ 1,000 ಮೀಟರ್) ಇಳಿಯುತ್ತಿದ್ದಂತೆ, ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ತಾಪಮಾನ ಇಳಿಯುತ್ತದೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಮಧ್ಯರಾತ್ರಿ ವಲಯದಲ್ಲಿ (1,000 ರಿಂದ 4,000 ಮೀಟರ್‌ಗಳು), ಸಂಪೂರ್ಣ ಕತ್ತಲೆಯೇ ಆ ಸಾಮ್ರಾಜ್ಯವನ್ನು ಆಳುತ್ತದೆ.

ಇನ್ನೂ ಪ್ರಪಾತ ವಲಯ (4,000 ರಿಂದ 6,000 ಮೀಟರ್) ವಿಶಾಲವಾದ ಸಾಗರ ತಳವನ್ನು ಆವರಿಸಿದೆ. ಇಲ್ಲಿ ತಾಪಮಾನವು ಘನೀಕರಣಕ್ಕಿಂತ ಸ್ವಲ್ಪ ಮೇಲಿರುತ್ತದೆ ಮತ್ತು ಒತ್ತಡವು ಅಗಾಧವಾಗಿರುತ್ತದೆ. ಹಡಲ್ ವಲಯ (6,000 ರಿಂದ 11,000 ಮೀಟರ್), ಕಂದಕಗಳು ಮತ್ತು ಕಣಿವೆಗಳನ್ನು ಒಳಗೊಂಡಿದೆ. ಸಾಗರದ ಆಳವಾದ ಭಾಗವಾದ ಮರಿಯಾನಾ ಕಂದಕವು ಮೌಂಟ್ ಎವರೆಸ್ಟ್ನ ಎತ್ತರಕ್ಕಿಂತ 11,034 ಮೀಟರ್ ಆಳಕ್ಕಿದೆ. ಸಮುದ್ರದ ಪ್ರತಿ 10 ಮೀಟರ್ ಆಳದಲ್ಲಿ ಒತ್ತಡದಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗುತ್ತಿರುತ್ತದೆ. ಸಮುದ್ರದ ಆಳವಾದ ಭಾಗದಲ್ಲಿ ಸುಮಾರು 50 ಜಂಬೋ ಜೆಟ್‌ಗಳನ್ನು ಒಬ್ಬನ ಮೇಲೆ ಜೋಡಿಸಿದಷ್ಟು ಪರಿಣಾಮ ಬೀರುತ್ತದೆ.

ಸಬ್‌ಮರ್ಸಿಬಲ್‌ಗೆ ಏನಾಗಿರಬಹುದು?
ಸಮುದ್ರದ ಆಳದ ತೀವ್ರ ಒತ್ತಡವು ಅನ್ವೇಷಣೆಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಟೈಟಾನ್‌ನಂತಹ ಸಬ್‌ಮರ್ಸಿಬಲ್ ಕೆಳಗಿಳಿದಾಗ ಅದು ನೀರಿನ ಹೆಚ್ಚು ಭಾರವನ್ನು ತಡೆದುಕೊಳ್ಳಬೇಕಾಗುತ್ತದೆ. ಅದರ ಹೊರಗಿನ ಒತ್ತಡವು ಒಳಗಿನ ಒತ್ತಡಕ್ಕಿಂತ ಗಮನಾರ್ಹವಾಗಿ ಹೆಚ್ಚಾದರೆ ಅದು ಸ್ಫೋಟಕ್ಕೆ ಕಾರಣವಾಗಬಹುದು.

ಆದರೆ ಟೈಟಾನಿಕ್ ಹಡಗು ಮುಳುಗಿದ್ದಾಗ ಅದು ಸ್ಫೋಟಗೊಂಡಿರಲಿಲ್ಲ. ಯಾಕೆಂದರೆ, ಟೈಟಾನಿಕ್ ಕ್ರಮೇಣ ಕೆಳಗಿಳಿದಂತೆ ಗಾಳಿ ತುಂಬಿದ್ದ ಭಾಗಗಳು ನೀರಿನಿಂದ ತುಂಬಿರಬಹುದು. ಹಡಗಿನ ಒಳಗೆ ಮತ್ತು ಹೊರಗಿನ ಒತ್ತಡ ಸಮವಾಗಿ ಸ್ಫೋಟ ಆಗದೆ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಬ್‌ಮರ್ಸಿಬಲ್ ಗಾಳಿಯಿಂದ ತುಂಬಿತ್ತು. ಅಲ್ಲದೇ ನೀರಿನ ಆಳಕ್ಕೆ ವೇಗವಾಗಿ ಇಳಿಯಿತು. ಇದು ಅಪಾಯಕಾರಿ ಒತ್ತಡದ ವ್ಯತ್ಯಾಸವನ್ನು ಎದುರಿಸಲು ಕಾರಣವಾಗಿರಬಹುದು. ಈ ವ್ಯತ್ಯಾಸವು ಸಬ್‌ಮರ್ಸಿಬಲ್‌ನ ರಚನಾತ್ಮಕ ಮಿತಿಗಳನ್ನು ಮೀರಿ ಸ್ಫೋಟವನ್ನು ಅದು ಪ್ರಚೋದಿಸಬಹುದು.

ಸಮುದ್ರದಲ್ಲಿಯೇ ವಾಸಿಸುವ ಜೀವಿಗಳಿಗೆ ಈ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ಪ್ರಕೃತಿಯೇ ನೀಡಿರುತ್ತದೆ. ಬದುಕಲು ವಿಶಿಷ್ಟವಾದ ದೇಹ ರಚನೆಯನ್ನು ಸಮುದ್ರದಾಳದ ಜೀವಿಗಳು ಹೊಂದಿರುತ್ತವೆ. ಆದರೆ ಮನುಷ್ಯನಿಗಾಗಲಿ ಮುನುಷ್ಯ ನಿರ್ಮಾಣ ಮಾಡಿರುವ ಸಾಧನಗಳಿಗೆ ಈ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ.

ಆ ಕಾರಣಕ್ಕಾಗಿ ಹೆಚ್ಚಿನ ನೀರೊಳಗಿನ ಆಳ-ಸಮುದ್ರದ ಅನ್ವೇಷಣೆಯನ್ನು ಮಾನವರಹಿತ ಸಾಧನಗಳಿಂದ ನಡೆಸಲಾಗುತ್ತದೆ. ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಆಳ ಸಮುದ್ರದ ವಾಹನಗಳ ಪೈಕಿ ರಿಮೋಟ್ ಆಪರೇಟೆಡ್ ವೆಹಿಕಲ್ಸ್, ಆಟೋಮೆಟಿಕ್ ವಾಹನಗಳನ್ನು ಬಳಸಲಾಗುತ್ತದೆ. ಆದರೆ ಸಬ್‌ಮರ್ಸಿಬಲ್ ಹೆಚ್ಚಿನ ಆಳದ ಅಧ್ಯಯನಕ್ಕೆ ಯೋಗ್ಯವಲ್ಲ ಎನ್ನುವುದು ಈ ದುರಂತ ಸಾಬೀತು ಪಡಿಸಿದಂತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

Web Stories

ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್

TAGGED:seaSubmersibleTitan TragedyTitanicಟೈಟಾನಿಕ್ ಹಡಗುಸಬ್‌ಮರ್ಸಿಬಲ್
Share This Article
Facebook Whatsapp Whatsapp Telegram

Cinema Updates

Darshans fans misbehave Case Pratham allegations Company Fans Association Clarification
ಕುಡಿದು ಗಲಾಟೆ ಮಾಡಿ ಖಾರ ಬನ್ ತಿಂದ ಕೇಸ್‌ ಇದು – ಪ್ರಥಮ್‌ಗೆ ಡಿ ಕಂಪನಿ ತಿರುಗೇಟು
Bengaluru City Cinema Karnataka Latest Main Post
ramya 4
ನಂಬರ್ ಇಲ್ಲ, ಸಂಪರ್ಕದಲ್ಲೂ ಇಲ್ಲ, ದರ್ಶನ್‌ಗೆ 100% ಜವಾಬ್ದಾರಿ ಇದೆ: ರಮ್ಯಾ
Cinema Crime Latest Main Post Sandalwood
ramya 2
ರೇಣುಕಾಸ್ವಾಮಿಗೂ ಇವ್ರಿಗೂ ಏನ್ ವ್ಯತ್ಯಾಸ? – `ಡಿ’ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು
Bengaluru City Cinema Crime Latest Main Post Sandalwood
Nagalakshmi Chowdary
`ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
Bengaluru City Cinema Districts Karnataka Latest Top Stories
Ramya 5
`ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ
Bengaluru City Cinema Latest Main Post Sandalwood

You Might Also Like

CHIDAMBARAM
Latest

ಪಹಲ್ಗಾಮ್‍ ದಾಳಿ ಉಗ್ರರು ಪಾಕ್‌ನಿಂದ ಬಂದವರಲ್ಲ: ಚಿದಂಬರಂ ಕ್ಲೀನ್‍ಚಿಟ್

Public TV
By Public TV
15 minutes ago
Urea
Bengaluru City

ರಸಗೊಬ್ಬರ ಪೂರೈಕೆಗೆ ರಾಜ್ಯದಿಂದ 6 ಬಾರಿ ಮನವಿ – ದಿಢೀರ್ ಕೊರತೆಗೆ ಕಾರಣವೇನು?

Public TV
By Public TV
1 hour ago
N R Gnanamurthy
Bengaluru City

ಕೋಲಾರದ ಹರಿಕಥೆ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ ಬೆಂಗಳೂರಿನಲ್ಲಿ ನಿಧನ

Public TV
By Public TV
1 hour ago
Dharmasthala Case
Dakshina Kannada

ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – 13 ಸ್ಥಳ ಗುರುತು ಮಾಡಿದ ದೂರುದಾರ

Public TV
By Public TV
1 hour ago
Himavad Gopalaswamy Hills 2
Chamarajanagar

ಜು.29 ರಿಂದ ಎರಡು ದಿನ ಹಿಮವದ್ ಗೋಪಾಲಸ್ವಾಮಿ ದೇವಾಲಯ ಬಂದ್‌ – ಯಾಕೆ ಗೊತ್ತಾ?

Public TV
By Public TV
2 hours ago
Cancer Day Care Center
Dakshina Kannada

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ.. ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
Welcome Back!

Sign in to your account

Username or Email Address
Password

Lost your password?