Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ

Public TV
Last updated: June 14, 2023 10:26 pm
Public TV
Share
2 Min Read
TNPL 1
SHARE

ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ (Tamil Nadu Premier League) ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ (Abhishek Tanwar) ಒಂದೇ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ಸಾಧನೆ ಮಾಡಿದ್ದಾರೆ.

ಹೌದು, ತಮಿಳುನಾಡು ಪ್ರೀಮಿಯರ್ ಲೀಗ್‍ನ (TNPL) 7ನೇ ಆವೃತ್ತಿ ಅದ್ಧೂರಿ ಆರಂಭ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಚೆಪಾಕ್ ಗಿಲ್ಲೀಸ್ ಹಾಗೂ ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ 2ನೇ ಪಂದ್ಯದಲ್ಲಿ ಬೇಡದ ದಾಖಲೆಯೊಂದು ಸೃಷ್ಟಿಯಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‍ನ ಕೊನೆಯ ಎಸೆತದಲ್ಲಿ ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ 18 ರನ್ ಬಿಟ್ಟುಕೊಟ್ಟು ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ

ಒಂದೇ ಎಸೆತದಲ್ಲಿ 18 ರನ್ ಬಂದಿದ್ದು ಹೇಗೆ?
2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದ ವೇಗಿ ಅಭಿಷೇಕ್ ಮೊದಲ 5 ಎಸೆತಗಳಲ್ಲಿ ಕೇವಲ 7 ರನ್‍ಗಳನ್ನು ಬಿಟ್ಟುಕೊಟ್ಟು ಉತ್ತಮವಾಗಿಯೇ ಬೌಲಿಂಗ್ ಮಾಡಿದ್ದರು. ಕೊನೆಯ ಎಸೆತವನ್ನ ಕೂಡ ಅಭಿಶೇಕ್ ಅದ್ಭುತ ಯಾರ್ಕರ್ ಎಸೆದು ಬ್ಯಾಟರ್ ಅನ್ನು ಬೌಲ್ಡ್ ಮಾಡಿದರು. ಆದರೆ ಅದು ನೋಬಾಲ್ ಎಂದು ಅಂಪೈರ್ ಘೋಷಿಸಿದರು. ನಂತರ ಮತ್ತೆ ಇನ್ನಿಂಗ್ಸ್‍ನ ಕೊನೆಯ ಎಸೆತವನ್ನು ಎಸೆದ ಅಭಿಷೇಕ್ ಎಸೆತವನ್ನು ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದರು. ಅದು ಕೂಡ ನೋಬಾಲ್ ಎಂದು ಅಂಫೈರ್ ಘೋಷಿಸಿದರು. ನಂತರ ಎಸೆತ ಕೂಡ ನೋಬಾಲ್. ಆಗ ಎರಡು ರನ್‍ಗಳು ಎದುರಾಳಿ ತಂಡದ ಖಾತೆಗೆ ದೊರೆಯಿತು. 4ನೇ ಬಾರಿಗೆ ಕೊನೆಯ ಎಸೆತವನ್ನು ಎಸೆದಾಗ ಅದು ವೈಡ್ ಆಗಿ ಮತ್ತೊಂದು ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು. ಮುಂದಿನ ಪ್ರಯತ್ನದಲ್ಲಿ ಕೊನೆಗೂ ಲೀಗಲ್ ಎಸೆತ ಎಸೆದರು. ಆದ್ರೆ ಆ ಬಾಲ್‍ನ್ನೂ ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಸಿಕ್ಸರ್‌ಗೆ ಅಟ್ಟಿದರು.

TNPL

ಈ ಮೂಲಕ ಚೆಪಾಕ್ ಗಿಲ್ಲೀಸ್ ತಂಡ ಒಂದೇ ಎಸೆತದಲ್ಲಿ 18 ರನ್‍ಗಳನ್ನು ಕಲೆಹಾಕಿತು. ಈ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಚೆಪಾಕ್ ತಂಡ 5 ವಿಕೆಟ್ ಕಳೆದುಕೊಂಡು 217 ರನ್‍ಗಳ ಬೃಹತ್ ಮೊತ್ತ ಕಲೆಹಾಕಲು ಯಶಸ್ವಿಯಾಯಿತು. ಸಂಜಯ್ ಯಾದವ್ ಕೇವಲ 12 ಎಸೆತಗಳಲ್ಲಿ 31 ರನ್‍ಗಳನ್ನು ಗಳಿಸಿದರೆ ಆರಂಭಿಕ ಆಟಗಾರ ಪ್ರದೋಶ್ ಪೌಲ್ 55 ಎಸೆತಗಳಲ್ಲಿ 88 ರನ್‍ಗಳನ್ನು ಬಾರಿಸಿ ಅಬ್ಬರಿಸಿದರು.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‍ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಮಹ್ಮದ್ ಅದ್ನಾನ್ ಖಾನ್ ಅಂತಿಮ ಹಂತದಲ್ಲಿ ಕೇವಲ 15 ಎಸೆತಗಳಲ್ಲಿ 47 ರನ್‍ಗಳಿಸಿದರಾದರೂ ಅದು ತಂಡದ ನೆರವಿಗೆ ಬರಲಿಲ್ಲ. ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದ ಕಾರಣ ಚೆಪಾಕ್ ಗಿಲ್ಲೀಸ್ ವಿರುದ್ಧ ಸೋಲು ಅನುಭವಿಸಿತು. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

TAGGED:Abhishek TanwarTamil Nadu Premier LeagueTNPLಅಭಿಷೇಕ್ ತನ್ವರ್ಕ್ರಿಕೆಟ್ತಮಿಳುನಾಡುತಮಿಳುನಾಡು ಪ್ರೀಮಿಯರ್ ಲೀಗ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
1 hour ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
2 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
5 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
15 hours ago

You Might Also Like

Hardhik Vibhuthi 2
Latest

ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

Public TV
By Public TV
27 minutes ago
Basavasagar dam
Districts

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ

Public TV
By Public TV
45 minutes ago
bike taxi
Bengaluru City

ಜೂ.16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬಂದ್

Public TV
By Public TV
1 hour ago
Prateek Joshi
Belgaum

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

Public TV
By Public TV
2 hours ago
Air India Ahmedabad Plane Crash Black box found on hostel rooftop
Latest

ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

Public TV
By Public TV
2 hours ago
CAR
Districts

ಕೊಡಗು | ತೆಂಗಿನ ಮರ ಉರುಳಿಸಿ ಕಾರು ಜಖಂಗೊಳಿಸಿದ ಪುಂಡಾನೆ!

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?