ಬೆಂಗಳೂರು: ಇಂದು ಕೃಷಿ ಸಚಿವ ಚೆಲುವರಾಯಸ್ವಾಮಿ (N. Chaluvaraya Swamy) ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೃಷಿ ಚಟುವಟಿಕೆ ಮಾದರಿಯಲ್ಲಿ ಕೇಕ್ ರಚನೆ ಮಾಡಿ ಸಚಿವರ ಹುಟ್ಟುಹಬ್ಬ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವರು, ನನಗೆ ನನ್ನ ಬರ್ತ್ ಡೇ (Chaluvaraya Swamy Birthday) ಮುಖ್ಯ ಅಲ್ಲ ರಾಜ್ಯದ ಹಿತ ಮುಖ್ಯ. ನನ್ನ ಮುಂದೆ ಸಾಕಷ್ಟು ಸವಾಲುಗಳು ಇವೆ ಅವುಗಳನ್ನ ನಿಭಾಯಿಸಬೇಕಿದೆ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿ ಅನ್ನೋದೇ ನನ್ನ ಆಶಯ. ಕಾಂಗ್ರೆಸ್ ಭರವಸೆ ನೀಡಿರೋ ಗ್ಯಾರಂಟಿಗಳನ್ನ ಜಾರಿ ಮಾಡಿಯೇ ಮಾಡ್ತೀವಿ. ಈ ಹಿಂದಿನ ಸರ್ಕಾರ ಕೊಟ್ಟ ಭರವಸೆಯನ್ನ ಈಡೇರಿಸಿದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ; ಆಪರೇಷನ್ ಥಿಯೇಟರ್ನಲ್ಲಿ ಟೈಟಾಗಿ ಮಲಗಿದ್ದ ವೈದ್ಯ – ವಿಷ್ಣುಸೇನಾ ಚಿತ್ರದ ಪಾರ್ಟ್ 2 ಕಥೆ ಹೆಣೆದ ಸಿಬ್ಬಂದಿ
ಮೇ 15ರಂದು ಸರ್ಕಾರ ರಚನೆ ಆಗಿದೆ. ಇನ್ನೂ ಒಂದೇ ಕ್ಯಾಬಿನೆಟ್ ಆಗಿರೋದು. ಸಮಯ ತೆಗೆದುಕೊಳ್ಳುತ್ತೆ ಗ್ಯಾರಂಟಿಗಳನ್ನ ಜಾರಿ ಮಾಡಿಯೇ ಮಾಡ್ತೀವಿ. ಶುಕ್ರವಾರ ಸಭೆ ಇದೆ ಸಭೆಯಲ್ಲಿ ತೀರ್ಮಾನ ಆಗುತ್ತೆ. ಅಧಿಕಾರಗಳು ಎಲ್ಲಾವನ್ನು ವ್ಯವಸ್ಥಿತವಾಗಿ ಜಾರಿ ಆಗಬೇಕು ತಯಾರಿ ಬೇಕು. ಹಾಗಾಗಿ ಕೊಟ್ಟ ಮಾತಿನಿಂದ ನಡೆದುಕೊಳ್ತೆವೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ದೊಡ್ಡ ಸಮಾವೇಶ ಮಾಡಿ ಹಬ್ಬದ ದಿನ ಘೋಷಣೆ ಮತ್ತೆ ವಾದ್ರಾ ಬರ್ತ್ ಡೇ ದಿನ ಘೋಷಣೆ ಮಾಡ್ತಾರಂತೆ ನಿಜಾನಾ ಎಂಬ ಪ್ರಶ್ನೆಗೆ ಉತ್ತರಿಸಿದ ಚೆಲುವರಾಯಸ್ವಾಮಿ, ನನಗೆ ಅದು ಮಾಹಿತಿ ಇಲ್ಲ ಎಂದರು.