ʼಸುಪ್ರೀಂʼ ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್‌ ನಜೀರ್‌ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ

Public TV
1 Min Read
Supreme Court judge Justice S Abdul Nazeer

ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್ ನಜೀರ್ (Abdul Nazeer) ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ (Governor) ರಾಷ್ಟ್ರಪತಿ ನೇಮಿಸಿದ್ದಾರೆ.

ಇವರು ಮೂಲತಃ ಮೂಡಬಿದ್ರೆಯ ಬೆಳುವಾಯಿ ಕಾನ ನಿವಾಸಿ. ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.

Supreme Court judge Justice S Abdul Nazeer

ನಜೀರ್‌ ಅವರು ಕರ್ನಾಟಕ ಹೈಕೋರ್ಟ್‌ನಿಂದ 2017ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ನಂತರ 2023ರ ಜನವರಿ 4ರಲ್ಲಿ ನಿವೃತ್ತರಾದರು.

ನಜೀರ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಕೆ.ಎಸ್‌.ಪುಟ್ಟಸ್ವಾಮಿ ಪ್ರಕರಣ, ತ್ರಿವಳಿ ತಲಾಖ್‌, ಅಯೋಧ್ಯ-ಬಾಬ್ರಿ ಮಸೀದಿ ವಿವಾದ ಮೊದಲಾದ ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿದವರ ಸಾಲಿನಲ್ಲಿ ಇದ್ದರು. ಇದನ್ನೂ ಓದಿ: ಪತ್ನಿ ಮೇಲೆ ಡೌಟ್- ತನ್ನ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ತಂದೆ

ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಸರ್ವಾನುಮತದ ತೀರ್ಪು ನೀಡಿದ ಪೀಠದಲ್ಲಿ ನಜೀರ್‌ ಅವರು ಸಹ ಇದ್ದರು. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಂತಾ ಶ್ರದ್ಧೆ, ಭಕ್ತಿಯಿಂದ ಗೌರವಿಸುತ್ತೇವೆ: ಸಿದ್ದರಾಮಯ್ಯ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *