ಶಾಸಕರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಾಗಿ ಬಂದು 1 ಲಕ್ಷ ರೂ. ಲಪಟಾಯಿಸಿದ ಕಳ್ಳರು

Public TV
1 Min Read
S V Ramachandra Birthday 1

ದಾವಣಗೆರೆ: ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ (S.V Ramachandra) ಅವರ ಹುಟ್ಟುಹಬ್ಬದ (Birthday) ಕಾರ್ಯಕ್ರಮದಲ್ಲಿ ಅವರ ಆಪ್ತ ಸಹಾಯಕನ ಹಾಗೂ ಕಾರ್ಯಕರ್ತನ ಜೇಬಿನಲ್ಲಿದ್ದ ಒಂದು ಲಕ್ಷ (1 Laks) ರೂಪಾಯಿಗಳನ್ನು ಖತರ್ನಾಕ್ ಕಳ್ಳರು ಲಪಟಾಯಿಸಿದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.

S V Ramachandra

ಎಸ್.ವಿ ರಾಮಚಂದ್ರಪ್ಪ ಕಳೆದ ಜ.16 ರಂದು ಹುಟ್ಟು ಹಬ್ಬದ ಹಿನ್ನೆಲೆ ಜಗಳೂರಿನಲ್ಲಿ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ವೇದಿಕೆ ಮೇಲೆ ಶಾಸಕರಿಗೆ ಶುಭಾಶಯಗಳನ್ನು ತಿಳಿಸುವ ನೆಪದಲ್ಲಿ ಬಂದ ಕಳ್ಳರು ಶಾಸಕರ ಆಪ್ತ ಸಹಾಯಕ ಸಂತೋಷ್ ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಅವರ ಪತಿ ಓಬಳೇಶ್ ಜೇಬಿಗೆ ಕತ್ತರಿ ಹಾಕಿ ಇಬ್ಬರಿಂದ 1 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ಇದನ್ನೂ ಓದಿ: ಉದ್ಯೋಗಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

ಬಿಳಿ ಬಟ್ಟೆ ಹಾಕಿಕೊಂಡು ಪಕ್ಕಾ ಕಾರ್ಯಕರ್ತರಂತೆ ಬಂದಿದ್ದ ಕಳ್ಳರು ಶಾಸಕರಿಗೆ ಶುಭ ಕೋರಿ ಫೋಟೋ ತೆಗೆಸುವ ನೆಪದಲ್ಲಿ ಕಳ್ಳರು ವೇದಿಕೆ ಏರಿದ್ದಾರೆ. ಮೊದಲು ಇಬ್ಬರ ಜೇಬಿನಲ್ಲಿ ಹಣ ಇರುವುದನ್ನು ಖಾತ್ರಿ ಪಡಿಸಿಕೊಂಡ ಕಳ್ಳರು, ನಂತರ ಬೇಕೆಂದು ಕ್ರೌಡ್ ಕ್ರಿಯೇಟ್ ಮಾಡಿ ಸಂತೋಷ್ ಜೇಬಿನಿಂದ 50 ಸಾವಿರ ರೂ. ಮತ್ತು ಓಬಳೇಶ್ ಜೇಬಿನಿಂದ 50 ಸಾವಿರ ರೂ. ಎಗರಿಸಿದ್ದಾರೆ. ಜೇಬಿನಿಂದ ಹಣ ಲಪಟಾಯಿಸಿ ಒಬ್ಬನ ಕೈಯಿಂದ ಮತ್ತೊಬ್ಬನಿಗೆ ನೀಡಿದ್ದಾರೆ. ಕಳ್ಳರ ಖತರ್ನಾಕ್ ಕಳ್ಳತನ ವೇದಿಕೆಗೆ ಹಾಕಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಬಳಿಕ ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೂರು ರಾಜ್ಯಗಳ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *