ಬೆಂಗಳೂರು: ಚುನಾವಣಾ (Election) ಹೊಸ್ತಿಲಲ್ಲಿ ಬೆಂಗಳೂರಿನಲ್ಲಿ (Bengaluru) ಈಗಾಗಲೇ ಮತದಾರರಿಗೆ ಆಮಿಷವೊಡ್ಡಲು ಕಸರತ್ತು ಶುರುವಾಗಿದೆ. ಅದ್ರಲ್ಲೂ ಹಬ್ಬ ಬಂತು ಅಂದ್ರೆ ಈಗ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.
ಒಂದ್ಕಡೆ ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly Election) ಅಖಾಡ ಬಲಗೊಳಿಸುವ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮತ್ತೊಂದ್ಕಡೆ ಬೆಂಗಳೂರಿನಲ್ಲಿಯೂ ಈಗ ಚುನಾವಣಾ ಹೊಸ್ತಿಲಲ್ಲಿ ಮತದಾರರ ಮನಸೆಳೆಯಲು ಗಿಮಿಕ್ಗಳು ಶುರುವಾಗಿದೆ. ಹಬ್ಬದ ನೆಪದಲ್ಲಿ ಮತದಾರರಿಗೆ ಉಡುಗೊರೆಗಳು ಸಿಕ್ಕಾಪಟ್ಟೆ ಸಪ್ಲೈಯಾಗ್ತಿದೆ. ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ಕಳುಹಿಸಿದ್ದಾರೆ ಎಂದು ಎಎಪಿ (AAP) ಆರೋಪಿಸಿದ್ದು, ಗಿಫ್ಟ್ ಬಾಕ್ಸ್ ಸಮೇತ ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ. ಸೋಲಿನ ಭಯಕ್ಕೆ ಜನ್ರಿಗೆ ತಟ್ಟೆ, ಲೋಟ ಕೊಟ್ಟು ಒಲೈಕೆ ಮಾಡೋಕೆ ಹೊರಟಿದ್ದಾರೆ ಇದು ಮತದಾರರಿಗೆ ಮಾಡುವ ಅವಮಾನ ಅಂತಾ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಚಿರತೆ ಆತಂಕ
ಈಗಾಗಲೇ ಬೆಂಗಳೂರಿನ ಬೇರೆ ಬೇರೆ ಕ್ಷೇತ್ರದಲ್ಲಿ ಮತಭೇಟೆಯ ಸರ್ಕಸ್ ಶುರುವಾಗಿದ್ದು ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಅಂತಾ ಎಎಪಿ ಆರೋಪಿಸಿದೆ. ಜನರಿಗೆ ಬೇಕಾಗಿರೋದು ಎಲೆಕ್ಷನ್ ಟೈಂನಲ್ಲಿ ಕೊಡುವ ತಟ್ಟೆ, ಲೋಟ ಗಿಫ್ಟ್ ಅಲ್ಲ. ಬದಲಾಗಿ ಗೆಲ್ಲಿಸಿ ಕೊಟ್ಟ ಜನರಿಗೆ ಕೊಡುವ ಬೆಸ್ಟ್ ಗಿಫ್ಟ್ ಅಂದ್ರೆ ಜನಪ್ರತಿನಿಧಿಗಳು ಮಾಡುವ ಅಭಿವೃದ್ಧಿ ಕೆಲಸ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: BJPಯಿಂದ ರಿಪೋರ್ಟ್ ಕಾರ್ಡ್ ಪಾಲಿಟಿಕ್ಸ್; ಜನರ ಮುಂದೆ ಡಬಲ್ ಇಂಜಿನ್ ಸರ್ಕಾರಗಳ ಸಾಧನಾ ವರದಿ ಅನಾವರಣಕ್ಕೆ ಮುಹೂರ್ತ ಫಿಕ್ಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k