– ಸುದ್ದಿಗೋಷ್ಠಿಯಲ್ಲಿ ವಿಭಿನ್ನತೆ ಮೆರೆದ ರವಿ ಡಿ.ಚೆನ್ನಣ್ಣನವರ್
ಬೆಂಗಳೂರು: ಸಾಮಾನ್ಯವಾಗಿ ಸುದ್ದಿಗೋಷ್ಠಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸುವುದು ಸಹಜ, ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ.ಡಿ.ಚನ್ನಣ್ಣವರ್ ಇಂದು ಸಿಪಿಐಗೆ ಮಾಧ್ಯಮಗಳಿಗೆ ವಿವರಣೆ ನೀಡುವಂತೆ ಸಲಹೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ಕಳೆದ ಐದು ದಿನದ ಹಿಂದೆ ಐದು ವರ್ಷದ ಮಗು ರಿಯಾನ್ ಕೊಲೆ ನಡೆದಿತ್ತು. ಮಗುವಿನ ಚಿಕ್ಕಪ್ಪ ದಾದಾಪೀರ್ ಕ್ಷುಲ್ಲಕ ವಿಚಾರದಲ್ಲಿ, ಮಗುವನ್ನ ಕೊಲೆ ಮಾಡಿ ಮನೆಯ ಮೇಲಿನ ನೀರಿನ ಸಿಂಟೆಕ್ಸ್ ನಲ್ಲಿ ಹಾಕಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಐದು ದಿನದಲ್ಲಿ ಬೇದಿಸುವಲ್ಲಿ ನೆಲಮಂಗಲ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
- Advertisement 2
- Advertisement 3
ಈ ಪ್ರಕರಣ ಸಂಬಂಧ ಇಂದು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಗ್ರಾಮಾಂತರ ಎಸ್.ಪಿ ರವಿ ಡಿ ಚೆನ್ನಣ್ಣನವರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಾಳೆ ನಿವೃತ್ತಿಯಾಗಲಿರುವ ನೆಲಮಂಗಲ ಸಿಪಿಐ ಶಿವಣ್ಣರಿಗೆ ಮಾತನಾಡಲು ಅನುವು ಮಾಡಿಕೊಟ್ಟಿದ್ದಾರೆ. ನಾಳೆ ನಿವೃತ್ತಿಯಾಗಲಿರುವ ಸಿಪಿಐ ಶಿವಣ್ಣರಿಗೆ ರವಿ.ಡಿ.ಚನ್ನಣ್ಣವರ್ ಅಭಿನಂಧಿಸಿರು.
- Advertisement 4
ಈ ವೇಳೆ ಮಾತನಾಡಿದ ರವಿ.ಡಿ.ಚನ್ನಣ್ಣವರ್ ಸಾಕಷ್ಟು ಪ್ರಕರಣದಲ್ಲಿ ಸಿಪಿಐ ಶಿವಣ್ಣ ಉತ್ತಮ ಕೆಲಸ ಮಾಡಿ ನಾಳೆ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು. ಅಲ್ಲದೆ ಕ್ರೀಡಾಪಟು ಆಗಿದ್ದ ಶಿವಣ್ಣ ಪೊಲೀಸ್ ಇಲಾಖೆಗೆ ಸೇರಿ ರಾಜ್ಯದ ನಾನಾ ಕಡೆ ಸೇವೆ ಸಲ್ಲಿಸಿ ಉತ್ತಮ ವ್ಯಕ್ತಿಯಾಗಿ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದು, ಇಲಾಖೆಯಲ್ಲಿಯು ಉತ್ತಮ ಕೆಲಸ ಮಾಡಿದ್ದಾರೆ ಎಂದರು.