ಚಾಮರಾಜನಗರ: ಕೊರೊನಾ ಹಿನ್ನೆಲೆ ಈ ಬಾರಿ ಮಲೆಮಹದೇಶ್ವರ ಬೆಟ್ಟಕ್ಕೆ 5 ದಿನಗಳ ಕಾಲ ಪ್ರವೇಶವನ್ನು ನಿಷೇಧಿಸಲಾಗಿದೆ.
ಗುರುವಾರ ಶಿವರಾತ್ರಿ ಹಬ್ಬವಿರುವುದರಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತದೆ. ಹೀಗಾಗಿ ಮಾರ್ಚ್ 9 ರಿಂದ 14 ರವರೆಗೆ ಶಿವರಾತ್ರಿ ಜಾತ್ರೆಗೆ ನಿಷೇಧ ಹೇರಲಾಗಿದೆ.
- Advertisement 2
- Advertisement 3
ಭಾನುವಾರ ಚಿನ್ನದ ರಥದ ಸೇವೆ ಮಾಡಲು ಬೆಟ್ಟದಲ್ಲಿ ಮಾದಪ್ಪನ ಭಕ್ತರು ಮುಗಿ ಬಿದ್ದಿದ್ದರು. ಅಲ್ಲದೆ ನಿನ್ನೆ ಒಂದೇ ದಿನ ವಿವಿಧ ಸೇವೆಗಳಿಂದ ದೇವಾಲಯಕ್ಕೆ 9,22,024 ರೂ. ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದ ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಸರಳ ಹಾಗೂ ಸಂಪ್ರದಾಯಕವಾಗಿ ಆಚರಣೆ ಮಾಡಲಾಗುತ್ತಿದ್ದು, ಐದು ದಿನಗಳ ಕಾಲ ಬೆಟ್ಟದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಮಾತ್ರ ಮಾದಪ್ಪನ ದರ್ಶನ ದೊರೆಯಲಿದೆ.
- Advertisement 4
ಹೊರಗಿನಿಂದ ಬೆಟ್ಟಕ್ಕೆ ಬರುವ ಭಕ್ತರಿಗೂ, ಕಾಲ್ನಡಿಗೆಯಿಂದ ಬರುವ ಭಕ್ತರಿಗೂ ಬೆಟ್ಟಕ್ಕೆ ಪ್ರವೇಶ ನಿಷೇಧಸಿಲಾಗಿದೆ ಎಂಬುವುದರ ಬಗ್ಗೆ ಈಗಾಗಲೇ ಜಿಲ್ಲಾಡಳಿತ, ಪ್ರಾಧಿಕಾರ ಆದೇಶ ಹೊರಡಿಸಿದೆ.