– ಮುತ್ತತ್ತಿ ಕಾಡಿನಲ್ಲಿ ಆಹಾರಕ್ಕಾಗಿ ಕೋತಿಗಳ ಪರದಾಟ
ಮಂಡ್ಯ: ಮುತ್ತತ್ತಿ ಕಾಡಿನ ರಸ್ತೆಯಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕೋತಿಗಳಿಗೆ ಆಹಾರವನ್ನು ನೀಡಿ ಮಳವಳ್ಳಿ ಶಾಸಕ ಅನ್ನದಾನಿ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾಡಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದರು. ಈ ವೇಳೆ ಒಂದು ರಸ್ತೆಯಲ್ಲಿ ಕೋತಿಗಳಿಗೆ ಪ್ರವಾಸಿಗರು ಆಹಾರ ಪದಾರ್ಥಗಳನ್ನು ನೀಡುತ್ತಿದ್ದರು. ಇದೀಗ ಲಾಕ್ಡೌನ್ ಇರುವ ಕಾರಣ ಪ್ರವಾಸಿಗರು ಮುತ್ತತ್ತಿಗೆ ಬಾರದ ಕಾರಣ ಕೋತಿಗಳಿಗೆ ಆಹಾರ ಇಲ್ಲದೇ ಪರದಾಡುತ್ತಿವೆ.
ಕೋತಿಗಳು ಆಹಾರವಿಲ್ಲದೆ ಪರದಾಡುವ ವಿಷಯ ತಿಳಿದ ಮಳವಳ್ಳಿ ಶಾಸಕ ಅನ್ನದಾನಿ ಮುತ್ತತ್ತಿಗೆ ತೆರಳಿ ಕೋತಿಗಳಿಗೆ ಬಾಳೆಹಣ್ಣು ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ನೀಡಿದರು. ಈ ವೇಳೆ ಕೋತಿಗಳು ಆಹಾರ ನೋಡುತ್ತಿದ್ದಂತೆ ಆಹಾರಕ್ಕಾಗಿ ಮುಗಿ ಬಿದ್ದವು. ಹಸಿದ ಕೋತಿಗಳಿಗೆ ಆಹಾರ ನೀಡುವ ಮೂಲಕ ಶಾಸಕ ಅನ್ನದಾನಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಓದಿ: 10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು