ಚಿಕ್ಕಬಳ್ಳಾಪುರ: ಸ್ಕೂಟಿಯನ್ನ ಅಡ್ಡಗಟ್ಟಿ ಯುವತಿಗೆ ಚಾಕುವಿನಿಂದ ಬೆದರಿಸಿ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಅಗಲಗುರ್ಕಿ ಬೈಪಾಸ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಕಳ್ಳತನ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟದ ನಿವಾಸಿ ಅರ್ಚನಾ ಸರ ಕಳೆದುಕೊಂಡ ಯುವತಿ. ಸರಿಸುಮಾರು 20 ಗ್ರಾಂ ಮೌಲ್ಯದ ಚಿನ್ನದ ಸರ ಕಳವಾಗಿದೆ. ತನ್ನ ತಂಗಿಯನ್ನ ಬಿಜಿಎಸ್ ಕಾಲೇಜಿಗೆ ಬಿಟ್ಟು ಮನೆಗೆ ಹಿಂದಿರುಗುವಾಗ ನಿರ್ಜನ ಪ್ರದೇಶದ ಸರ್ವಿಸ್ ರಸ್ತೆಯಲ್ಲಿ ಸ್ಕೂಟಿ ಅಡ್ಡ ಹಾಕಿದ್ದಾರೆ. ಚಾಕು ತೋರಿಸಿ ಬೆದರಿಸಿದ್ದಾರೆ. ಕೂಡಲೇ ಯುವತಿ ಸರಗಳ್ಳರಿಂದ ತಪ್ಪಿಸಿಕೊಳ್ಳಲು ಸ್ಕೂಟಿ ಬಿಟ್ಟು ಒಡಿ ಹೋಗಿ ರಸ್ತೆಯ ಬದಿಯ ಹಳ್ಳದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಆದ್ರೂ ಬಿಡದ ಸರಗಳ್ಳರು ಆಕೆಯ ಕತ್ತಿನಲ್ಲಿದ್ದ ಸರ ಕಸಿಯಲು ಯತ್ನಿಸಿದ್ದಾರೆ.
ಈ ವೇಳೆ ಬೈಕ್ ನಲ್ಲಿ ಯಾರೋ ಬರೋದನ್ನ ಗಮನಿಸಿದ ಕಳ್ಳರು ತಮ್ಮ ಡ್ಯುಕ್ ಬೈಕ್ ನಲ್ಲಿ ಅರ್ಧ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ 112 ಪೊಲೀಸ್ ಸಿಬ್ಬಂದಿ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಯುವತಿ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರೆ.