ತುಮಕೂರು: ಸಂಸದ ಜಿ.ಎಸ್.ಬಸವರಾಜು ಅವರ ಹಿರಿತನ ಹಾಗೂ ಸಂಸದ ಸ್ಥಾನಕ್ಕೆ ಬೆಲೆ ಕೊಡದೇ ಅವಹೇಳನ ಮಾಡಿದ ಗುಬ್ಬಿ ಜೆ.ಡಿ.ಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರದ್ದು ವಿಕೃತ ಮನೋಭಾವ ಎಂದು ಬಿಜೆಪಿ ಪಕ್ಷ ಟೀಕಿಸಿದೆ.
ಶಾಸಕ ಶ್ರೀನಿವಾಸ್ ಸಂಸದರಿಗೆ ಅವಹೇಳನ ಮಾಡಿದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕ ಪ್ರತಿಭಟಿಸಿದೆ. ನಗರದ ಟೌನ್ ಹಾಲ್ ವೃತ್ತದಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಶಾಸಕ ಶ್ರೀನಿವಾಸ್ ವಿರುದ್ಧ ಘೋಷಣೆ ಕೂಗಿದರು.
- Advertisement 2
- Advertisement 3
ಶ್ರೀನಿವಾಸ್ ಜಿ.ಎಸ್.ಬಸವರಾಜ್ ಗೆ ಅವಹೇಳನ ಮಾಡಿಲ್ಲ. ಬದಲಾಗಿ ಸಂವಿಧಾನದತ್ತವಾದ ಸಂಸದ ಸ್ಥಾನಕ್ಕೆ ಅವಹೇಳನ ಮಾಡುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದರು.
- Advertisement 4
ಮುಖಂಡ ಹೆಬ್ಬಾಕ ರವಿ ಮಾತನಾಡಿ, ಎಸ್.ಆರ್.ಶ್ರೀನಿವಾಸ್ ರದ್ದು ವಿಕೃತ ಮನೋಭಾವ. ಹಾಗಾಗಿ ಅವರ ಬಾಯಿಯಿಂದ ಇಂತಹ ಮಾತುಗಳು ಬರುತ್ತದೆ. ಇಡೀ ದೇಶದಲ್ಲಿ ಇಂತಹ ಘಟನೆ ನಡೆಯಬಾರದು ಎಂದು ಖಂಡಿಸಿದರು. ಯುವ ಮುಖಂಡ ಹನುಮಂತರಾಜು ಮಾತಾಡಿ, ಶ್ರೀನಿವಾಸ್ ಅವರ ಕೊನೆಯ ದಿನ ಹತ್ತಿರವಾದಂತೆ ಕಾಣುತ್ತಿದೆ. ಹಾಗಾಗಿ ತಮ್ಮ ನಾಲಿಗೆ ಹರಿಬಿಡುತ್ತಾರೆ. ಶ್ರೀನಿವಾಸ್ ಆಡಿದ ಕೆಟ್ಟೋದಗಳ ಮಾತನ್ನು ಗುಬ್ಬಿ ಕ್ಷೇತ್ರದ ಮನೆ ಮನೆಗೆ ತಲುಪಿಸಿ ಮುಂದಿನ ದಿನದಲ್ಲಿ ಪಾಠ ಕಲಿಸುತ್ತೆವೆ ಎಂದು ಎಚ್ಚರಿಕೆ ಕೊಟ್ಟರು.