ಚಿಕ್ಕಬಳ್ಳಾಪುರ: ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ ಕೋವಿಡ್ 19 ಕಡಿವಾಣಕ್ಕೆ ರಾಜ್ಯದಲ್ಲಿ ನಾಳೆಯಿಂದ 4 ದಿನಗಳ ಕಾಲ ಕೋವಿಡ್ ಲಸಿಕಾ ಉತ್ಸವ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
- Advertisement 2
ನಗರ ಹೊರವಲಯದ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲಾಡಳಿತದೊಂದಿಗೆ ಕೋವಿಡ್ ಸಂಬಂಧ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಏಪ್ರಿಲ್ 11 ರಂದು ಜ್ಯೋತಿ ಬಾ ಪುಲೆ ಜನ್ಮ ದಿನ ಹಾಗೂ ಏಪ್ರಿಲ್ 14 ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆಯವರೆಗೂ ರಾಜ್ಯದಲ್ಲಿ ಕೋವಿಡ್ ಲಸಿಕಾ ಉತ್ಸವ ಜರುಗಲಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲೂ ನಾಳೆ ಜ್ಯೋತಿ ಬಾ ಪುಲೆ ಜನ್ಮದಿನದ ಅಂಗವಾಗಿ ಮಹಿಳೆಯರು ಹಾಗೂ ಅಂಬೇಡ್ಕರ್ ಜಯಂತಿಯಂದು ಯುವಕರು, ವಿದ್ಯಾವಂತರು, ವಕೀಲರು ಸ್ವಯಂಪ್ರೇರಿತ ರಾಗಿ ಬಂದು ಲಸಿಕೆ ಪಡೆದುಕೊಳ್ಳಬೇಕು ಅಂತ ಮನವಿ ಮಾಡಿಕೊಂಡರು.
- Advertisement 3
- Advertisement 4
ಇದೇ ವೇಳೆ ಇಂದಿನಿಂದ ರಾಜ್ಯದ 8 ನಗರಗಳಲ್ಲಿ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯಯವರೆಗೆ ಏಪ್ರಿಲ್ 20 ರವರೆಗೆ ರಾತ್ರಿ ಕೋವಿಡ್ ಕಫ್ರ್ಯೂ ಜಾರಿಯಾಗ್ತಿದೆ. ಅನಗತ್ಯವಾಗಿ ಮೋಜುಮಸ್ತಿ ಮಾಡುವವರಿಗೆ ಕಡಿವಾಣ ಹಾಕಿ ಕೊರೊನಾ ಕಂಟ್ರೋಲ್ ಮಾಡಿ ಜನ ಜಾಗೃತಿ ಮೂಡಿಸಲಿದ್ದೇವೆ. ಇನ್ನೂ ರಾಜ್ಯದಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಗೆ ಕೊರತೆ ಇಲ್ಲ. ಈಗಾಗಲೇ ರಾಜ್ಯದಲ್ಲೇ ಇರುವ ಮೈಲಾನ್, ಕ್ಯಾಡುಲಾಕ್, ಚ್ಯುಬಿಲಿಯೆಂಟ್ ಕಂಪನಿಗಳು ಆಡಳಿತ ಮಂಡಳಿ ಜೊತೆ ಸಭೆ ಮಾಡಿ ಮಾತನಾಡಿ ರಾಜ್ಯಕ್ಕೆ ಬೇಕಾಗುವಷ್ಟು ಔಷಧಿ ಸರಬರಾಜು ಮಾಡಬೇಕು ಅಂತ ಸೂಚನೆ ನೀಡಿದ್ದೇನೆ ಎಂದರು.