ಹಾಸನ: ಸಾಮಾಜಿಕ ನಾಟಕದ ಉದ್ಘಾಟನೆಗೆ ತೆರಳಿದ್ದ ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಡು ಹೇಳುವ ಮೂಲಕ ಜನರನ್ನು ರಂಜಿಸಿದ್ದಾರೆ.
ಹಾಸನ ಜಿಲ್ಲೆಯ ದಿಬ್ಬೂರಿನಲ್ಲಿ ನಡೆದ ಸಾಮಾಜಿಕ ನಾಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಲಿಂಗೇಗೌಡ ತೆರಳಿದ್ದರು. ಈ ವೇಳೆ ಭಾಷಣ ಮಾಡಿದ ನಂತರ ಪ್ರೇಕ್ಷಕರು, ಶಾಸಕರ ಬಳಿ ಕುರುಕ್ಷೇತ್ರ ನಾಟಕದ ಭೀಮನ ಪಾತ್ರ ಅಭಿನಯಿಸಿ ತೋರಿಸುವಂತೆ ಪಟ್ಟು ಹಿಡಿದರು.
ಆಗ ಶಾಸಕ ಶಿವಲಿಂಗೇಗೌಡ ಅಲ್ಲಿ ನೆರೆದಿದ್ದ ಜನರ ಮುಂದೆ ಭೀಮನ ಪಾತ್ರವನ್ನು ಡೈಲಾಗ್ ಹೇಳುವುದರ ಜೊತೆಗೆ ಅಭಿನಯ ಮಾಡಿ ತೋರಿಸಿದ್ದಾರೆ.