– ಗಂಡನಿಂದ ಕಿರುಕುಳ, ಮಂತ್ರವಾದಿಗಳಿಂದ ಛಾಟಿಯೇಟು
– ಮೊದ್ಲ ಮದ್ವೆ ಮುಚ್ಚಿಟ್ಟು 2ನೇ ಮದ್ವೆಯಾಗಿರೋ ಆರೋಪಿ
ಬೆಂಗಳೂರು: ಮದುವೆ ಆದ ದಿನವೇ ಪತ್ನಿಗೆ ಪತಿರಾಯ ಕಿರುಕುಳ ನೀಡಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
- Advertisement 2
2020ರ ಅಕ್ಟೋಬರ್ 29ರಂದು ಭರತ್ ಎಂಬಾತನ ಜೊತೆಗೆ ಯುವತಿಯ ಮದುವೆಯಾಗಿದೆ. ಮೊದಲ ರಾತ್ರಿಯೇ ಪತಿ ಕಂಠಪೂರ್ತಿ ಕುಡಿದುಕೊಂಡು ಬಂದಿದ್ದ. ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಪತಿಯನ್ನು ನೋಡಿದ ಪತ್ನಿ ಅಂತರ ಕಾಯ್ದುಕೊಂಡಿದ್ದಳು. ಈ ವಿಚಾರ ತಿಳಿದ ಪತಿ ಮನೆಯವರು ಸೊಸೆಗೆ ದೆವ್ವ ಬಂದಿದೆ ಅಂತ ಕಿರುಕುಳ ನೀಡಲು ಆರಂಭಿಸಿದ್ದಾರೆ.
- Advertisement 3
- Advertisement 4
ಮಂಚದ ಕೆಳಗೆ ನಿಂಬೆಹಣ್ಣು ಇಡುವುದು. ಮಾಟಮಂತ್ರ ಮಾಡಿಸುವವರ ಕೈಯಲ್ಲಿ ಛಾಟಿಯಿಂದ ಹೊಡೆಸುವುದು. ತಲೆ ಮೇಲೆ ನಿಂಬೆ ಹಣ್ಣು ಕೊಯ್ಯುವುದು, ಮುಖಕ್ಕೆ ಬೂದಿ ಹಾಕುವುದು, ಬೂದಿಯನ್ನು ಅನ್ನದಲ್ಲಿ ಮಿಕ್ಸ್ ಮಾಡಿ ತಿನ್ನಿಸುವುದು ಮಾಡಿದ್ದಾರೆ. ಇವೆಲ್ಲದಕ್ಕೆ ವಿರೋಧಿಸಿದ್ರೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡುವುದು. ಇಷ್ಟು ಮಾತ್ರವಲ್ಲದೆ ನಿನ್ನ ಇಲ್ಲೇ ಸಾಯಿಸುತ್ತೇವೆ ಅಂತ ಊಟ ನೀಡದೇ ಪತಿ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.
ಪತಿ ಮನೆಯವರ ಕಿರುಕುಳದಿಂದ ಬೇಸತ್ತ ನವವಿವಾಹಿತೆ ಹೆಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಯುವತಿಯ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿ ಭರತ್ ರೆಡ್ಡಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಮದುವೆ ಮುಚ್ಟಿಟ್ಟು 2ನೇ ಮದುವೆಯಾಗಿರುವುದು ಬಯಲಾಗಿದೆ.