ಧಾರವಾಡ: ಮೈಸೂರು ಸಂಸದ ಪ್ರತಾಪ್ ಸಿಂಹರವರಿಗೆ ಶಕ್ತಿ ಇದ್ದರೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
- Advertisement 2
ಧಾರವಾಡದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ, ಸಚಿವರು ಸೇರಿ ಸಿಎಂ ಹತ್ತಿರ ಮಾತನಾಡಿ ಡಿಸಿ ಬದಲಾವಣೆ ಮಾಡಿಕೊಳ್ಳಲಿ. ಇದನ್ನೆಲ್ಲ ನೋಡಿ ಜನ ಉಗಿತಾ ಇದ್ದಾರೆ, ಡಿಸಿ ಕೆಲಸ ಪ್ರತಾಪ್ ಸಿಂಹ ಮಾಡಲು ಆಗುವುದಿಲ್ಲ. ಪ್ರತಾಪ್ ಸಿಂಹ ಕೆಲಸ ಡಿಸಿ ಮಾಡಲು ಆಗುವುದಿಲ್ಲ. ಏನೇ ಜಾರಿ ಮಾಡುವಿದ್ದರೂ ಡಿಸಿನೇ ಮಾಡಬೇಕು. ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಇವರಿಗೆ ಸಮಸ್ಯೆ ಆದರೆ ಬದಲಿಸಿಕೊಳ್ಳಲಿ. ಐದೇ ನಿಮಿಷಕ್ಕೆ ಮಂತ್ರಿ, ಅಧಿಕಾರಿಗಳನ್ನು ಬದಲಿಸುತ್ತಿರಿ ಅಲ್ವಾ, ನಿಮಗೆ ಆಗದಿರುವವರನ್ನು ಬದಲಿಸಿಕೊಳ್ಳಿ, ನಿಮಗೆ ಬೇಕಾದವರನ್ನು ತಲೆ ಮೇಲೆ ಕುರಿಸಿಕೊಂಡು ಕೆಲಸ ಮಾಡಿ ಎಂದು ಕಿಡಿಕಾರಿದರು.
- Advertisement 3
- Advertisement 4
ಇದೇ ವೇಳೆ ಸಚಿವರ ಸಿಡಿ ಕೇಸ್ ಪ್ರಕರಣ ವಿಚಾರವಾಗಿ ಮಾತನಾಡಿದ ಡಿಕೆಶಿ, ಅದ್ಯಾವುದೋ ಒಂದು ವಿಡಿಯೋ ನೋಡಿ ಕಾಲಿಗೆ ಗುಂಡು ಹಾಕಿದ್ದಾರೆ. ಇನ್ನೊಂದು ವಿಡಿಯೋ ನೋಡಿ ಸರ್ಟಿಫಿಕೇಟ್ ಕೊಡುತ್ತಿದ್ದರೆ. ಇದಕ್ಕೆಲ್ಲ ನಾವು ಒಂದು ಹೋರಾಟ ಮಾಡುತ್ತೇನೆ ಎಂದರು.
ಎಸ್ಐಟಿ ಕಚೇರಿಗಳು ಎಷ್ಟಿವೆ? ಸರ್ಕಲ್ ಇನ್ಸ್ಪೆಕ್ಟರ್ಗಳೆಲ್ಲರ ಲಿಸ್ಟ್ ತರಿಸುತ್ತೇನೆ. ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯಾಗಿಯೇ ಇದಕ್ಕೆ ಸಪೋರ್ಟ್ ಮಾಡಿದ್ದಾರೆ. ಮುಖ್ಯಮಂತ್ರಿಯೇ ನಿರ್ದೋಷಿಯಾಗಿ ಸಿಡಿ ಕೇಸ್ನಿಂದ ಹೊರ ಬರುತ್ತಾರೆ ಅಂತಾ ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕೋರ್ಟ್ ಇನ್ನು ಬದುಕಿದೆ ಹರಿಹಾಯ್ದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆಯಾದರೂ ಮಾಡಿಕೊಳ್ಳಲಿ. ಅವರ ಜೊತೆಯಾದರು ಇಟ್ಟುಕೊಳ್ಳಲಿ. ಅದು ಅವರ ಪಾರ್ಟಿ ವಿಚಾರ. ನಮ್ಮವರನ್ನ ಕರೆದುಕೊಂಡು ಹೋಗಿ ಸರ್ಕಾರ ಮಾಡುತ್ತಾರಾ. ನಾವೇನು ಮಾಡೋಕೆ ಆಗುತ್ತೆ ಎಂದು ಹೇಳಿದರು. ಇದನ್ನು ಓದಿ: ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ
ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ವೆಚ್ಚ ಮಾಡಿರುವ 38 ಕೋಟಿ ರೂಪಾಯಿಯ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್ ಸಿಂಹರವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಶ್ನಿಸಿದ್ದರು. ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾನುವಾರ ರಾತ್ರಿ ಮಾಧ್ಯಮಗಳ ಮೂಲಕ ಉತ್ತರ ನೀಡಿದ್ದರು.