ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ಪ್ರತಿದಿನವನ್ನು ನೀವು ಕಾಣುತ್ತಿದ್ದೀರಾ ಎಂದರೇ ಅದು ಆಶೀರ್ವಾದ. ಪ್ರತಿಕ್ಷಣ ನೀವು ಖುಷಿಯಾಗಿರುತ್ತೀರಾ ಎಂದರೆ ಅದು ನಿಮಗೆ ಸಿಕ್ಕ ದೊಡ್ಡ ಉಡುಗೊರೆ ಎನ್ನುವ ಮೂಲಕ ಪ್ರಸ್ತುಕ ಸ್ಥಿತಿಯ ಬಗ್ಗೆ ನಟ ಕಿಚ್ಚ ಸುದೀಪ್ ಎರಡೇ ಅಕ್ಷರದಲ್ಲಿ ಬದುಕಿನ ಸತ್ಯವನ್ನು ತಿಳಿಸಿದ್ದಾರೆ.
In the current situation,,,
Every day you get to see, is a blessing.
Every reason you get to smile now,,, is a gift.
Every txt or cal tat you receive enquiring about you,,, speaks loud about those truely concerned about you.
Lessons… indeed ,,,lessons. pic.twitter.com/IiFOqNV00w
— Kichcha Sudeepa (@KicchaSudeep) May 7, 2021
ಸದ್ಯದ ಪರಿಸ್ಥಿತಿ ಎಲ್ಲರಲ್ಲೂ ಒಂದು ರೀತಿಯ ಆತಂಕ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನವನ್ನು ಸಂತೋಷದಿಂದ ಕಳೆಯಬೇಕು. ಪ್ರಕೃತಿ ಮತ್ತು ಜೀವನವನ್ನು ಯಾರು ಕೂಡ ನಿಯಂತ್ರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಚಾರಿಸಲು ಸಂದೇಶ ಅಥವಾ ಕರೆ ಬರುತ್ತಿದ್ದರೇ ಅದು ಅವರಿಗೆ ನಿಮ್ಮ ಬಗ್ಗೆ ಇರುವ ಕಾಳಜಿ ಎನ್ನುವ ಮೂಲಕ ಆ ಕಾಳಜಿಯನ್ನು ಕಾಪಾಡಿಕೊಳ್ಳಿ ಎಂದು ಬಾದಾಷಾ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಜೀವನದ ಪಾಠವನ್ನು ಮಾಡಿದ್ದಾರೆ.
View this post on Instagram
ಇತ್ತೀಚೆಗಷ್ಟೇ ಅನಾರೋಗ್ಯಕ್ಕೆ ನಟ ಕಿಚ್ಚ ಸುದೀಪ್ ಒಳಗಾಗಿದ್ದರು. ಆರೋಗ್ಯ ಸರಿಯಿಲ್ಲದ ಕಾರಣ ಬಿಗ್ಬಾಸ್ನ ವಾರಾಂತ್ಯ ಕಾರ್ಯಕ್ರಮದಲ್ಲಿಯೂ ಹಲವು ವಾರಗಳಿಂದ ಭಾಗಿಯಾಗಿಲ್ಲ. ಈ ವಾರಾಂತ್ಯದಲ್ಲೂ ಕೂಡ ನಟ ಕಿಚ್ಚ ಸುದೀಪ್ ಬಿಗ್ಬಾಸ್ ನಡೆಸಿಕೊಡುವುದು ಬಹುತೇಕ ಅನುಮಾನವಾಗಿದೆ. ಕಿಚ್ಚ ಸುದೀಪ್ಗಾಗಿ ವಾರವೀಡಿ ಕಾಯುತ್ತಿದ್ದ ಬಿಗ್ಬಾಸ್ ಸ್ಪರ್ಧಿಗಳು ಮತ್ತು ಅಭಿಮಾನಿಗಳಿಗೆ ಇದರಿಂದ ಭಾರೀ ಬೇಸರ ಉಂಟಾಗಿದೆ. ಕಿಚ್ಚಾ ಆದಷ್ಟು ಬೇಗ ಹುಷಾರಾಗಿ ಬರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.